ಬನ್ರೋ ನನ್ ಮಕ್ಳಾ ಯಾರು ಬರ್ತೀರೋ ಬನ್ನಿ

ಬುಧವಾರ, 15 ಮಾರ್ಚ್ 2023 (17:18 IST)
ತುಮಕೂರಿನ ಕೊರಟಗೆರೆಯಲ್ಲಿ ನಡೆದ ST ಸಮಾವೇಶದಲ್ಲಿ ಮಾಜಿ ಡಿಸಿಎಂ ಪರಮೇಶ್ವರ್​​​ BJP ಮುಖಂಡ ಅನಿಲ್​​​​ ಕುಮಾರ್​​ಗೆ ಪರೋಕ್ಷವಾಗಿ ಬಹಿರಂಗ ಸವಾಲ್​ ಎಸೆದಿದ್ದಾರೆ.. ಬನ್ರೋ ನನ್ ಮಕ್ಳಾ ಯಾರು ಬರ್ತೀರೋ ಬನ್ನಿ, ನಾನು ಹಠಕ್ಕೆ ಬಿದ್ದಿದ್ದೇನೆ, ನಿಮ್ಮಗಳ ಧೈರ್ಯ ನನಗೆ ಏನಾಗಲ್ಲ, ಯಾವ ಮೀಸೆಗೂ ನಾನು ಹೆದರೋಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಅನಿಲ್ ಕುಮಾರ್​ಗೆ ಡಾ.G.ಪರಮೇಶ್ವರ್ ತಿರುಗೇಟು ನೀಡಿದ್ದಾರೆ. ವಿಧಾನ ಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಹೇಗಾದರೂ ಮಾಡಿ ಈ ಬಾರಿ ಗೆಲ್ಲಲೇ ಬೇಕೇಂಬ ಆಸೆಯಿಂದ ಎಲ್ಲ ಪಕ್ಷದ ನಾಯಕರುಗಳು ಒಬ್ಬರ ಮೇಲೊಬ್ಬರು ಭಾಷಣದ ಮೂಲಕ ಕೇಸರೆರಚಾಟ ನಡೆಸಿದ್ದಾರೆ. ಅದರಂತೆ ಜಿಲ್ಲೆಯ ಕೊರಟಗೆರೆಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಬೆಂಬಲಿತ ಒಕ್ಕಲಿಗ ಮುಖಂಡರ ಸಮಾವೇಶದಲ್ಲಿ ಮಾಜಿ DCM ಪರಮೇಶ್ವರ್ ಅಬ್ಬರದ ಭಾಷಣ ಮಾಡಿದ್ದಾರೆ. ಎಲ್ಲಾ ಸಮುದಾಯಗಳು ಪರಮೇಶ್ವರ್ ಬೇಕು ಎನ್ನುತ್ತಿದ್ದಾರೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ