ಕೋಲಾರದ ಬಂಗಾರಪೇಟೆ ಪಟ್ಟಣದಲ್ಲಿ ವೃದ್ದೆ ಕೊಲೆ

ಭಾನುವಾರ, 16 ಅಕ್ಟೋಬರ್ 2022 (21:26 IST)
ಕೋಲಾರದಲ್ಲಿ ಒಂಟಿ ವೃದ್ದೆಯೊಬ್ಬಳು ಪಕ್ಕದ ಮನೆಯ ನಿವಾಸಿಗಳಿಂದಲೇ ಬರ್ಬರವಾಗಿ ಕೊಲೆಯಾಗಿದ್ದಾಳೆ.ನಗ ನಾಣ್ಯಕ್ಕಾಗಿ ಕೊಲೆಗೈದ ತಾಯಿ ಮಗನನ್ನ ಪೊಲೀಸರು ಬಂಧಿಸಿದ್ದಾರೆ.ಬಂಗಾರಪೇಟೆ ನಗರದ  ಶಾಂತಿನಗರದಲ್ಲಿ ಗುರುವಾರ ನಡೆದಿದ್ದ ಕೊಲೆಯಲ್ಲಿ ಆನಂದ್ ಕಿರಣ್ ಕುಮಾರ್ ಸಿಂಧೆ (45) ಹಾಗು 78 ವರ್ಷದ ತಾಯಿ  ಬಂಧನವಾದ ಆರೋಪಿಗಳಾಗಿದ್ದಾರೆ.ಒಂಟಿ ವೃದ್ದೆ ಶಾಂತಮ್ಮ ರನ್ನ ಕೊಲೆಗೈದು ತಾಯಿ ಮಗ ನಗನಾಣ್ಯ ದೋಚಿದ್ದಾರೆ.ಕೊಲೆ ನಂತರ ಚಿನ್ನಾಭರಣ ತಿರುಪತಿಯಲ್ಲಿ ತಾಯಿಮಗ ಅಡವಿಟ್ಟಿದ್ದಾರೆ.ಬೆಂಗಳೂರಿನಲ್ಲಿ  ಆರೋಪಿಗಳನ್ನ ಪೊಲೀಸರು ಬಂಧಿಸಿದಾರೆ.ಇನ್ನೂ ಈ ಪ್ರಕರಣ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ  ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ