ರಾಜ್ಯೋತ್ಸವದಂದೇ ಹೊಸ ಪಕ್ಷ ಸ್ಥಾಪನೆ: ಅನುಪಮಾ ಶೆಣೈ

ಗುರುವಾರ, 12 ಅಕ್ಟೋಬರ್ 2017 (20:40 IST)
ಕಲಬುರ್ಗಿ: ನವೆಂಬರ್ 1 ರಂದು ತಮ್ಮ ನೂತನ ಪಕ್ಷ ಸ್ಥಾಪನೆ ಮಾಡುವುದಾಗಿ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಹೇಳಿದ್ದಾರೆ.

ಕಲಬುರ್ಗಿಯಲ್ಲಿ ಮಾತನಾಡಿದ ಅವರು, ರಾಜ್ಯೋತ್ಸವದ ದಿನದಂದೇ ನೂತನ ಪಕ್ಷ ಸ್ಥಾಪನೆ ಮಾಡಿ, ಅಂದೇ ಪಕ್ಷದ ಹೆಸರು ಘೋಷಣೆ ಮಾಡುವೆ, ಸಭ್ರಷ್ಟಾಚಾರ ನಿರ್ಮೂಲನೆ, ಸರ್ಕಾರಿ ನೌಕರರಿಗೆ ಭದ್ರತೆ, ಕೂಲಿ ಕಾರ್ಮಿಕರ ಸಮಸ್ಯೆಗಳಿಗೆ ಮುಕ್ತಿ ಕೊಡಿಸುವುದು ನಮ್ಮ ಪಕ್ಷದ ಉದ್ದೇಶ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಪ್ರಚಾರ ಮಾಡಲು ಸಿದ್ಧತೆ ನಡೆದಿದೆ. ಜನರ ಅಭಿಪ್ರಾಯ ಸಂಗ್ರಹಿಸಿ, ಬಸವಣ್ಣನವರ ತತ್ವದ ಮೇಲೆ ನಮ್ಮ ಪಕ್ಷ ನಡೆಯಲಿದೆ. ಹೈದಬಾರಾದ್ ಕರ್ನಾಟಕ ಭಾಗದಲ್ಲಿ ಪಕ್ಷದ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡುತ್ತೇನೆ. 224 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ನಿಲ್ಲಿಸುವ ಇರಾದೆ ಹೊಂದಿದ್ದೇನೆ ಎಂದು ಅನುಪಮಾ ಶೆಣೈ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ