ನಮ್ಮದು ಗಟ್ಟಿ ಸರ್ಕಾರ, ಸಿದ್ದು ಬೆದರಿಕೆಗೆ ಹೆದರಲ್ಲ- ಆರ್.ಅಶೋಕ್

ಸೋಮವಾರ, 4 ನವೆಂಬರ್ 2019 (11:34 IST)
ಬೆಂಗಳೂರು : ನಮ್ಮದು ಗಟ್ಟಿ ಸರ್ಕಾರ, ಸಿದ್ದು ಬೆದರಿಕೆಗೆ ಹೆದರಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.




ಸಿಎಂ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಕೋರ್ಟ್ ಗೆ ದಾಖಲೆಗಳನ್ನು ಕೊಡಲಿ. ನಮ್ಮ ಬಳಿಯೂ ದಾಖಲೆಗಳು ಇವೆ.  ನಮ್ಮ ತಂಟೆಗೆ ಬರಲು ಹೋಗ್ಬೇಡಿ ಅಂತ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.


ಸರ್ಕಾರ ಬೀಳಿಸೋ ಹೇಳಿಕೆ ಕೊಟ್ಟಿದ್ದು, ಸಿದ್ದು ತಾನೇ? ಸಿದ್ದರಾಮಯ್ಯನವರೇ  ನೀವು ಸುಳ್ಳುಗಾರ ಆಗಬೇಡಿ ಎಂದು ಅಶೋಕ್ ಸಿದ್ದರಾಮಯ್ಯನವರ ವಿರುದ್ಧ ಕಿಡಿಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ