ಕೊರೊನಾ ಭೀತಿಯಲ್ಲಿದ್ದ ಜನರು ಮನೆ ಬಿಟ್ಟು ಹೊರಗೆ ಓಡಿದ್ಯಾಕೆ?

ಶನಿವಾರ, 4 ಏಪ್ರಿಲ್ 2020 (14:22 IST)
ಕೊರೊನಾ ವೈರಸ್ ಭೀತಿಯಲ್ಲಿದ್ದ ಜನರು ಏಕಾಏಕಿಯಾಗಿ ಮನೆಬಿಟ್ಟು ಹೊರಗೆ ಓಡಿದ್ದಾರೆ. 

ಏಕಾಏಕಿಯಾಗಿ ಭೂಮಿ ಕಂಪಿಸಿದ ಪರಿಣಾಮ ಕೆಲವು ಮನೆಗಳ ಗೋಡೆಗಳು ಬಿರುಕುಬಿಟ್ಟು ಜನರು ಆತಂಕಗೊಂಡ ಘಟನೆ ನಡೆದಿದೆ.

ಕೆ.ಆರ್. ಪೇಟೆ ತಾಲೂಕಿನ ಕೆಲವು ಗ್ರಾಮಗಳಲ್ಲಿ ಇದ್ದಕ್ಕಿದ್ದಂತೆ ಭೂಮಿ ಕಂಪಿಸಿದೆ.  ಭಯಭೀತರಾದ ಜನ ಗಾಬರಿಗೊಳಗಾಗಿದ್ದಾರೆ.  

ಮನೆಗಳಲ್ಲಿದ್ದ ಪಾತ್ರೆಗಳು ನೆಲಕ್ಕೆ ಉಳಿರೋದು ಜನರನ್ನು ಆತಂಕದಲ್ಲಿ ದೂಡಿದೆ.  ಕೊರೊನಾ ವೈರಸ್ ಭಯದ ಮಧ್ಯೆ ಕಂಪಿಸಿದ ಭೂಮಿಯಿಂದಾಗಿ ಮನೆಗಳೇ ಅಲುಗಾಡಿದ ಅನುಭವ ಜನರಿಗೆ ಆಗಿದೆ.  ಭಯದಿಂದ ಮನೆಬಿಟ್ಟು ಹೊರಗೆ ಬಂದಿದ್ದರು ಜನರು.

ಕೆ.ಆರ್. ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಸಿಂಗನಹಳ್ಳಿ, ಜೈನಹಳ್ಳಿ, ಮಾಚಹೊಳಲು, ವಡ್ಡರಗುಡಿ, ಸಾಕ್ಷಿಬೀಡು, ಬಿರವಳ್ಳಿ ಸೇರಿದಂತೆ ಅಕ್ಕಿಹೆಬ್ಬಾಳು ಹೋಬಳಿಯಾದ್ಯಂತ ಭೂಕಂಪನದ ಅನುಭವವಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ