ಈ ಮಾರ್ಗದಲ್ಲಿ ರೈಲು ಸಂಚಾರ ಖಾಯಂ ರದ್ದು
ಹುಬ್ಬಳ್ಳಿ–ಬೆಳಗಾವಿ ರೈಲು ಸಂಚಾರ ಖಾಯಂ ಆಗಿ ರದ್ದುಗೊಂಡಿದೆ.
ಮಹಾರಾಷ್ಟ್ರದ ಮಂಕಿ ಹಿಲ್–ಮುಂಬೈ ಸಮೀಪದ ಕರ್ಜತ್ ನಡುವೆ ರೈಲ್ವೆ ಸಂಬಂಧಿತ ಕಾಮಗಾರಿ ನಡೆಯಲಿರುವ ಕಾರಣ ನ. 3 ರಿಂದ 6, 10 ರಿಂದ 13, 17 ರಿಂದ 20 ಮತ್ತು 24 ರಿಂದ 27ರ ವರೆಗೆ ಮುಂಬೈ (ಛತ್ರಪತಿ ಶಿವಾಜಿ ಟರ್ಮಿನಸ್)–ವಿಜಯಪುರ ರೈಲು ಸಂಚಾರವನ್ನು ರದ್ದು ಮಾಡಲಾಗಿದೆ.
ನ. 11 ರಿಂದ 14, 18 ರಿಂದ 21 ಮತ್ತು 25 ರಿಂದ 28ರ ವರೆಗೆ ವಿಜಯಪುರ–ಮುಂಬೈ ಪ್ಯಾಸೆಂಜರ್ ಸಂಚಾರ ರದ್ದಾಗಿದೆ.