ಜೈಲಿಗೆ ಹೋಗುವಾಗ ಸ್ಟೈಲ್, ದರ್ಶನ್ ಕರೆತಂದ ಪೊಲೀಸರಿಗೆ ಸಂಕಷ್ಟ

Krishnaveni K

ಗುರುವಾರ, 29 ಆಗಸ್ಟ್ 2024 (13:06 IST)
ಬಳ್ಳಾರಿ: ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಹೋಗುವಾಗ ದರ್ಶನ್ ಧರಿಸಿದ್ದ ಬಟ್ಟೆ, ಕೂಲಿಂಗ್ ಗ್ಲಾಸ್ ಸೇರಿದಂತೆ ಸ್ಟೈಲಿಶ್ ಲುಕ್ ನಿಂದ ಈಗ ಬೆಂಗಾವಲು ಪೊಲೀಸರಿಗೆ ಸಂಕಷ್ಟ ಎದುರಾಗಿದೆ.

ಇಂದು ನಸುಕಿನಲ್ಲಿ ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಮೂರು ಪೊಲೀಸ್ ವಾಹನಗಳಲ್ಲಿ ಬಳ್ಳಾರಿಗೆ ತೆರಳಿದ್ದರು. ಪೊಲೀಸರು ಬಿಗಿ ಭದ್ರತೆಯಲ್ಲಿ ಅವರನ್ನು ಕರೆತಂದಿದ್ದಾರೆ. ಹೋಗುವ ದಾರಿಯಲ್ಲಿ ದರ್ಶನ್ ಮರೆ ಮಾಚಲು ವಾಹನಗಳಿಗೆ ಸ್ಕ್ರೀನ್ ಅಳವಡಿಸಲಾಗಿತ್ತು. ಆದರೆ ಜೈಲಿನ ದ್ವಾರಕ್ಕೆ ಹೋಗುವಾಗ ದರ್ಶನ್ ಕ್ಯಾಮರಾ ಕಣ್ಣಿಗೆ ಬಿದ್ದಿದ್ದರು.

ಈ ವೇಳೆ ದರ್ಶನ್ ಬ್ರ್ಯಾಂಡೆಡ್ ಟಿ ಶರ್ಟ್, ಕೂಲಿಂಗ್ ಗ್ಲಾಸ್ ಹಾಕಿಕೊಂಡು ಸ್ಟೈಲಿಶ್ ಆಗಿ ತೆರಳಿದ್ದರು. ಆದರೆ ಇದು ನಿಯಮಗಳಿಗೆ ವಿರುದ್ಧವಾಗಿದೆ. ಒಬ್ಬ ಖೈದಿಗೆ ಇಷ್ಟೆಲ್ಲಾ ಸವಲತ್ತು ಕೊಡಬಾರದು ಎಂಬ ನಿಯಮವಿದೆ. ಈ ವಿಚಾರ ಡಿಜಿಪಿ ಟಿ ಪಿ ಶೇಷ ಗಮನಕ್ಕೆ ಬಂದಿದ್ದು ಪೊಲೀಸರಿಗೆ ಈ ರೀತಿ ನಿಯಮ ಮೀರಿದ್ದು ಯಾಕೆ ಎಂದು ಕಾರಣ ಕೇಳಿ ನೋಟಿಸ್ ನೀಡಲು ಮುಂದಾಗಿದ್ದಾರೆ.

ಈ ಹಿಂದೆ ಸ್ಥಳ ಮಹಜರು ವೇಳೆ ಎ1 ಆರೋಪಿ ಪವಿತ್ರಾ ಗೌಡಗೆ ಮನೆಗೆ ತೆರಳಿದ್ದಾಗ ಲಿಪ್ ಸ್ಟಿಕ್ ಹಚ್ಚಿಕೊಂಡು ಬಂದಿದ್ದಕ್ಕೆ ಓರ್ವ ಮಹಿಳಾ ಸಿಬ್ಬಂದಿಗೆ ನೋಟಿಸ್ ನೀಡಲಾಗಿತ್ತು. ಇದೀಗ ಮತ್ತೆ ಬೆಂಗಾವಲು ಸಿಬ್ಬಂದಿಯಿಂದ ದರ್ಶನ್ ದಿರಿಸಿನ ವಿಚಾರವಾಗಿ ಎಡವಟ್ಟು ನಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ