ಬಿಜೆಪಿಯವರಿಗೆ ಅಂಬೇಡ್ಕರ್ ಅಲ್ಲ, ಸ್ವಂತ ಇತಿಹಾಸವೇ ಗೊತ್ತಿಲ್ಲ: ಪ್ರಿಯಾಂಕ್ ಖರ್ಗೆ
ಇಂದು ಮತ್ತೆ ಅದೇ ಮಾತನ್ನು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಬಿಜೆಪಿಯವರಿಗೆ ಅಂಬೇಡ್ಕರ್ ಬಿಡಿ ಅವರ ಇತಿಹಾಸವೇ ಗೊತ್ತಿಲ್ಲ. ನಾವು ಯಾರೋ ಹೇಳಿದ್ದು ಕೇಳಿದ್ದು ಕೇಳಿ ಈ ಹೇಳಿಕೆ ನೀಡಿಲ್ಲ. ಅಂಬೇಡ್ಕರ್ ಅವರು ತಮ್ಮ ಸ್ನೇಹಿತರಿಗೆ ತಮ್ಮದೇ ಕೈ ಬರಹದಲ್ಲಿ ಬರೆದ ಪತ್ರದಲ್ಲೇ ಬಹಳ ಸ್ಪಷ್ಟವಾಗಿ ಸಾವರ್ಕರ್ ಸೋಲಿಸಿದ್ದು ಎಂದು ಬರೆದಿದ್ದಾರೆ. ಇದನ್ನು ನಾವು ಹೇಳಿದ್ದಲ್ಲ. ಈಗ ರಾಜಕೀಯಕ್ಕಾಗಿ ಬಿಜೆಪಿ ನಮ್ಮ ಮೇಲೆ ಗೂಬೆ ಕೂರಿಸ್ತಿದೆ ಎಂದಿದ್ದಾರೆ.