ಪ್ರಚಾರ ಆರೋಪ, 5 ಪೊಲೀಸರ ವರ್ಗಾವಣೆ

ಶನಿವಾರ, 15 ಏಪ್ರಿಲ್ 2023 (17:14 IST)
ಹಿರಿಯೂರು BJP ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪರ ಪ್ರಚಾರಕ್ಕೆ ಪೊಲೀಸರು ಸಾಥ್​ ನೀಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.. ಈ ಕುರಿತಂತೆ ಐದು ಮಂದಿ ಪೊಲೀಸರ ವಿರುದ್ದ ಜಿಲ್ಲಾ ಚುನಾವಣಾ ಆಯೋಗಕ್ಕೆ ಪತ್ರ ಬರೆದು ದೂರು ನೀಡಲಾಗಿದೆ.. ಹಿರಿಯೂರು ಕಾಂಗ್ರೆಸ್ ಮುಖಂಡ ಈರಲಿಂಗೇಗೌಡ, ಖಾದಿ ರಮೇಶ್​ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದ್ದರು..ಈ ಬೆನ್ನಲ್ಲೇ ಐದು ಮಂದಿ ಪೊಲೀಸ್ ಪೇದೆಗಳ ವಿರುದ್ದ ಶಿಸ್ತು ಕ್ರಮಕ್ಕೆ ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು ಸೂಚನೆ ನೀಡಿದ್ದಾರೆ.. ಜಿಲ್ಲಾ ಚುನಾವಣಾಧಿಕಾರಿ ಬೆನ್ನಲ್ಲೇ ಚಿತ್ರದುರ್ಗ ಎಸ್ಪಿ ಪರಶುರಾಮ್ ಪೊಲೀಸ್ ಪೇದೆಗಳನ್ನು ವರ್ಗಾವಣೆ ಮಾಡಿದ್ದಾರೆ.. ಹಿರಿಯೂರು ನಗರ ಠಾಣೆಯ ತಿಮ್ಮರಾಯಪ್ಪ, ಮುನೇಶ್, ಗ್ರಾಮೀಣ ಠಾಣೆಯ ತಿಮ್ಮೇಶ್, ಪಿರ್ದೋಜ್, ಶಿವಮೂರ್ತಿ ವರ್ಗಾವಣೆ ಆಗಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ