ಆರ್.ಅಶೋಕ್ ಸತ್ಯ ಹರಿಶ್ಚಂದ್ರ ಸಂಬಂಧಿ- ರಾಮಲಿಂಗಾರೆಡ್ಡಿ

ಗುರುವಾರ, 1 ಫೆಬ್ರವರಿ 2018 (21:27 IST)

ಬಿಜೆಪಿ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರು ಸತ್ಯಹರಿಶ್ಚಂದ್ರ ಸಂಬಂಧಿಕರು ಎಂಬುದು ಡಿಎನ್ಎ ಪರೀಕ್ಷೆಯಿಂದ ಗೊತ್ತಾಗಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ವ್ಯಂಗ್ಯವಾಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿಯೊಂದಿಗೆ ಬಿಜೆಪಿಯವರು ಮಾತುಕತೆ ನಡೆಸಿರುವುದು ಸುಳ್ಳು ಎಂದು ಅಶೋಕ್ ಹೇಳಿರುವುದು ಸತ್ಯ ಇರಬೇಕು ಏಕೆಂದರೆ ಅವರು ಸತ್ಯ ಹರಿಶ್ಚಂದ್ರ ಸಂಬಂಧಿ ಅವರು ಸುಳ್ಳು ಹೇಳಲ್ಲ ಎಂದಿದ್ದಾರೆ.

ಆರ್.ಅಶೋಕ ಅವರ ಡಿಎನ್ಎ ಪರೀಕ್ಷೆ ಮಾಡಿಸಲಾಗಿದ್ದು, ಅವರು  ಸತ್ಯಹರಿಶ್ಚಂದ್ರ ವಂಶಕ್ಕೆ ಸೇರಿದವರಾಗಿದ್ದಾರೆ. ನಾವು ಮಾತ್ರ ಸುಳ್ಳು ಹೇಳುತ್ತೇವೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ