ಮಳೆಯಿಂದ ಹಾನಿಗೊಳಗಾದ ಸ್ಥಳಗಳಿಗೆ ಆರ್ ಅಶೋಕ್ ಭೇಟಿ

ಗುರುವಾರ, 1 ಸೆಪ್ಟಂಬರ್ 2022 (21:18 IST)
ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಮಳೆಯಿಂದ ಅವಾಂತರವೇ ಸೃಷ್ಟಿಯಾಗಿದೆ. ಸಿಲಿಕಾನ್​ ಸಿಟಿಯಲ್ಲಿ ಮಳೆಯಿಂದಾದ ಹಾನಿ ಕುರಿತಾಗಿ ಕಂದಾಯ ಸಚಿವ ಆರ್​​.ಅಶೋಕ್​​​ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರ. ವಾಡಿಕೆಗಿಂತ ಹೆಚ್ಚು ಮಳೆ ಬಂದಿದ್ದರಿಂದ ಸಮಸ್ಯೆಯಾಗಿದೆ. ಈ‌ ಬಾರಿ ಮಳೆಯಿಂದಾಗಿ ಬೊಮ್ಮನಹಳ್ಳಿ ಹಾಗೂ ಮಹದೇವಪುರ ಭಾಗದಲ್ಲಿ ಅತಿ ಹಾನಿಯಾಗಿದೆ. ಇಂದು ಸಿಎಂ ಬೊಮ್ಮಾಯಿ ಅವರು ಭೇಟಿ ನೀಡಲಿದ್ದಾರೆ ಎಂದರು. ಹಾನಿಗೊಳಗಾದ ಭಾಗದಲ್ಲಿ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಸರ್ಕಾರ ಎಲ್ಲಾ ಕ್ರಮ ತೆಗೆದುಕೊಳ್ಳುತ್ತಿದೆ. ಬೆಂಗಳೂರು ಹೊರತುಪಡಿಸಿ ಜಿಲ್ಲೆಗಳಲ್ಲಿ ಆದ ಹಾನಿ ಬಗ್ಗೆ  ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಾನಿಯಾಗಿರೋ‌ ಮನೆಗಳಿಗೆ ಪರಿಹಾರ ‌ನೀಡಲಾಗ್ತಿದೆ. ನಿರಾಶ್ರಿತರಿಗೆ 15 ದಿನಗಳ ಆಹಾರ ಕಿಟ್ ಸರ್ಕಾರ ನೀಡುತ್ತಿದೆ. ಮಳೆ ಏನು ಬೆಂಗಳೂರಲ್ಲಿ ಮಾತ್ರ ಆಗಿಲ್ಲ. ಅಮೆರಿಕಾ, ಪಾಕಿಸ್ತಾನ ಸೇರಿ ಎಲ್ಲಾ ಕಡೆ ಆಗಿದೆ. ಯಾರೋ ಏನೋ ಹೇಳಿದ್ರು ಅಂದ್ರೆ ಬೆಂಗಳೂರು ಬ್ಯ್ರಾಂಡ್ ಹಾಳಾಗಲ್ಲ ಎಂದು ತಿರುಗೇಟು ನೀಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ