ಬೆಂಗಳೂರಿಗೆ ಬಂದ ರಮೇಶ್ ಜಾರಕಿಹೊಳಿ, ಶ್ರೀಮಂತ ಪಾಟೀಲ್

ಮಂಗಳವಾರ, 30 ಜುಲೈ 2019 (18:05 IST)
ಮುಂಬೈನಲ್ಲಿದ್ದುಕೊಂಡು ಸ್ಪೀಕರ್ ಆದೇಶದಿಂದ ಅನರ್ಹಗೊಂಡಿರೋ ಶಾಸಕರಿಬ್ಬರು ಬೆಂಗಳೂರಿಗೆ ಬಂದಿದ್ದಾರೆ.

ರಮೇಶ್ ಜಾರಕಿಹೊಳಿ, ಶ್ರೀಮಂತ್ ಪಾಟೀಲ್ ರಾಜಧಾನಿಗೆ ಆಗಮಿಸಿದ್ದಾರೆ.

ಅನರ್ಹತೆ ಪ್ರಶ್ನೆ ಮಾಡಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದೇವೆ. ದುರುದ್ದೇಶಪೂರ್ವಕವಾಗಿ ನಮ್ಮನ್ನ ಅನರ್ಹಗೊಳಿಸಲಾಗಿದೆ ಅಂತ ರಮೇಶ್ ಜಾರಕಿಹೊಳಿ ಹೇಳಿದ್ರು.

ಸ್ಪೀಕರ್ ಗೆ ಆ ದೇವರು ಒಳ್ಳೆಯದನ್ನ ಮಾಡಲಿ ಅಂತಂದ ರಮೇಶ್ ಜಾರಕಿಹೊಳಿ,  ನ್ಯಾಯಾಲಯದಿಂದ ನ್ಯಾಯ ಸಿಗೋ ಭರವಸೆ ಇದೆ ಎಂದ್ರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ