ಗುಲಾಂ ನಬಿ ಆಜಾದ್ ರಾಜೀನಾಮೆ ವಿಚಾರವಾಗಿ ರಣದೀಪ್ ಸುರ್ಜೇವಾಲ ಟ್ವೀಟ್

ಶುಕ್ರವಾರ, 26 ಆಗಸ್ಟ್ 2022 (20:53 IST)
ಕಾಂಗ್ರೇಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ವಿರುದ್ದ ರಣದೀಪ್ ಸಿಂಗ್ ಸುರ್ಜೇವಾಲ ಆಕ್ರೋಶ ವ್ಯಕ್ತಪಡಿಸಿದಾರೆ.ಟ್ವಿಟ್ಟರ್ ನಲ್ಲಿ ಸುರ್ಜೇವಾಲ ಅಕ್ರೋಶ ಹೊರಹಾಕಿದ್ದು,1980 ರಿಂದ 2021 ರವರೆಗೆ ನಾಲ್ಕು ತಲೆಮಾರು ಗಾಂಧಿಗಳ ಹೆಸರಲ್ಲಿ ಅಧಿಕಾರ ಅನುಭಸಿದ್ದಾರೆ.24 ವರ್ಷಗಳ ಕೇಂದ್ರ ಮಂತ್ರಿ,  ಜಮ್ಮು & ಕಾಶ್ಮೀರ ಸಿಎಂ ಆಗಿದ್ದಾರೆ.35 ವರ್ಷ ಪ್ರಧಾ‌ನ ಕಾರ್ಯದರ್ಶಿಯಾಗಿ ಅಧಿಕಾರ ಅನುಭನಿಸಿದ್ದಾರೆ.ಆದರೂ ಅಂತವರೇ ಕಾಂಗ್ರೆಸ್ ‌ವ್ಯವಸ್ಥೆ ಬಗ್ಗೆ ಕೆಟ್ಟ ರೀತಿಯಲ್ಲಿ ದೂಷಿಸ್ತಿದ್ದಾರೆ.ಇದು ವ್ಯಕ್ತಿಯ ವ್ಯಕ್ತಿತ್ವ ಹಾಗೂ ಪಕ್ಷಕ್ಕೆ ಇವರ ಕೃತಜ್ಞತಾ ಭಾವ ಎಷ್ಟಿದೆ‌ ಅನ್ನೋದನ್ನ ತೋರಿಸುತ್ತದೆ ಎಂದು ಟ್ವೀಟ್ ಮೂಲಕ ಅಸಾಮಾಧಾನ ಹೊರಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ