ಅಂಬಿ ಹಠಾವೋ ಮಂಡ್ಯ ಬಚಾವ್ ಆಂದೋಲನ ಕೆಬ್ಬಳ್ಳಿ ಆನಂದ್ ಎಚ್ಚರಿಕೆ

ಬುಧವಾರ, 18 ಏಪ್ರಿಲ್ 2018 (07:58 IST)
ಬೆಂಗಳೂರು: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಮಂಡ್ಯ ಕ್ಷೇತ್ರಕ್ಕೆ ರೆಬಲ್ ಸ್ಟಾರ್ ಅಂಬರೀಷ್ ಗೆ ಟಿಕೆಟ್ ಕೊಡುವುದಾಗಿ ಸುದ್ದಿ ಬಂದಾಗಲೇ ಅಸಮಾಧಾನವೂ ಎದ್ದಿತ್ತು. ಅದೀಗ ಹೆಮ್ಮರವಾಗಿದೆ.

ಅಂಬರೀಷ್ ವಿರುದ್ಧ ರವಿಕುಮಾರ್ ಗಣಿಗ ಬೆಂಬಲಿಗರು ತೊಡೆ ತಟ್ಟಿದ್ದು, ಬಿ ಫಾರಂ ಸ್ವೀಕರಿಸದಂತೆ ಎಚ್ಚರಿಕೆ ನೀಡಿದ್ದಾರೆ. ರವಿಕುಮಾರ್ ಗಣಿಗ ಕಾಂಗ್ರೆಸ್ ನ ಮಂಡ್ಯ ಟಿಕೆಟ್ ಆಕಾಂಕ್ಷಿಯಾಗಿದ್ದರು.

ರವಿಕುಮಾರ್ ಆಪ್ತ ಕೆಬ್ಬಳ್ಳಿ ಆನಂದ್ ಅಂಬರೀಷ್ ವಿರುದ್ಧ ವಾಗ್ದಾಳಿ ನಡೆಸಿದ್ದು, ‘ನೀವು ಸಮೃದ್ಧರಾಗಿದ್ದೀರಿ. ಈಗ ಬೇರೆಯವರಿಗೆ ಅವಕಾಶ ಕೊಡಿ. ಒಂದು ವೇಳೆ ಪಕ್ಷ ಕೊಡುವ ಬಿ ಫಾರಂ ರವಿಕುಮಾರ್ ಗಣಿಗ ಅವರಿಗೆ ಹಸ್ತಾಂತರಿಸದಿದ್ದರೆ ಅಂಬಿ ಹಠಾವೋ ಮಂಡ್ಯ ಬಚಾವೋ ಆಂದೋಲನ ನಡೆಸಬೇಕಾದೀತು’ ಎಂದು ಎಚ್ಚರಿಸಿದ್ದಾರೆ.

ಇತ್ತ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ ರವಿಕುಮಾರ್ ಗಣಿಗ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ