ಗಣರಾಜ್ಯೋತ್ಸವದ ಹಿನ್ನಲೆ ; ಬೆಂಗಳೂರಿನ ಮಾಣಿಕ್ಯ ಷಾ ಪರೇಡ್ ಮೈದಾನದಲ್ಲಿ ಬಿಗಿಭದ್ರತೆ

ಶುಕ್ರವಾರ, 24 ಜನವರಿ 2020 (10:42 IST)
ಬೆಂಗಳೂರು : ಜನವರಿ 26ರಂದು ಗಣರಾಜ್ಯೋತ್ಸವ ಆಚರಣೆ ಹಿನ್ನಲೆ  ಬೆಂಗಳೂರಿನ ಮಾಣಿಕ್ಯ ಷಾ ಪರೇಡ್ ಮೈದಾನದಲ್ಲಿ ಬಿಗಿಭದ್ರತೆ ಏರ್ಪಡಿಸಲಾಗುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.

ಬಿಬಿಎಂಪಿ ಆಯುಕ್ತ, ಜಿಲ್ಲಾಧಿಕಾರಿಯಿಂದ ಜಂಟಿ ಸುದ್ದಿಗೋಷ್ಠಿ ನಡೆಸಿ 9 ಡಿಸಿಪಿಗಳ ನೇತೃತ್ವದಲ್ಲಿ ಪೊಲೀಸ್ ಬಿಗಿಬಂದೋಬಸ್ತ್ , 150 ಪೊಲೀಸ್ ಅಧಿಕಾರಿಗಳು, 943 ಪೊಲೀಸ್ ಸಿಬ್ಬಂದಿ. 10 ಕೆಎಸ್ ಆರ್ ಪಿ ತುಕಡಿ, 2 ಡಿಸ್ವ್ಯಾಟ್ ತಂಡ, ಗರುಡ ಪಡೆ, ಕ್ಷಿಪ್ರ ಕಾರ್ಯಾಚರಣೆ ಪಡೆ, ಕಮಾಂಡ್ ಕಂಟ್ರೋಲ್ ನಿಯೋಜನೆ, 7 ಕಡೆ ಎಎಸ್ ಚೆಕ್ ಪೋಸ್ಟ್ , 85 ಸಿಸಿಕ್ಯಾಮರಾ ಅಳವಡಿಕೆಗೆ ಸಿದ್ಧತೆ ಮಾಡಿಕೊ‍ಳ್ಳಲಾಗುತ್ತಿದೆ.

 

ಹಾಗೇ ಬೆಂಗಳೂರಿನಲ್ಲಿ ಜ.26ರಂದು ರೆಡ್ ಅಲರ್ಟ್ ಘೋಷಣೆ ಮಾಡಲಿದ್ದು,  ಗಣರಾಜ್ಯೋತ್ಸವದಂದು ಯಾವುದೇ ಧರಣಿಗೆ ಅವಕಾಶವಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿಕದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ