ವ್ಯಕ್ತಿಯೊಬ್ಬರ ಹತ್ಯೆಗೆ ಸಂಚು ರೂಪಿಸಿದ ಕಿಡಿಗೇಡಿಗಳು ಅಂದರ್

ಮಂಗಳವಾರ, 5 ಅಕ್ಟೋಬರ್ 2021 (21:34 IST)
ಬೆಂಗಳೂರು: ವ್ಯಕ್ತಿಯೊಬ್ಬರ ಹತ್ಯೆಗೆ ಸಂಚು ರೂಪಿಸಿದ್ದ ರೌಡಿ ಮತ್ತು ಆತನ ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ವಿಲ್ಸನ್ ಗಾರ್ಡನ್‌ನ ರೌಡಿ ಡೇವಿಡ್ ಮತ್ತು ಆತನ ಸಹಚರರಾದ ಮಂಜುನಾಥ್ ಸೇರಿದಂತೆ 10 ಮಂದಿಯನ್ನು ಬಂಧಿಸಲಾಗಿದೆ.
ಆಟೋ ಚಾಲಕರೊಬ್ಬರ ಪುತ್ರಿಯನ್ನು ರೌಡಿ ಡೇವಿಡ್ ಎಂಬಾತ​ ಪ್ರೀತಿಸುತ್ತಿದ್ದ. ಈ ವಿಚಾರ ಯುವತಿಯ ತಂದೆಗೆ ತಿಳಿದು ಮಗಳ ತಂಟೆಗೆ ಬಾರದಂತೆ ಎಚ್ಚರಿಕೆ ಕೊಟ್ಟಿದ್ದರು. ಆದರೂ ಸುಮ್ಮನಾಗಿರಲಿಲ್ಲ. ಎರಡು ದಿನಗಳ ಹಿಂದೆ ಯುವತಿ ಹುಟ್ಟುಹಬ್ಬವೆಂದು ಆಕೆಯ ಮನೆ ಮುಂದೆ ಕೇಕ್ ಕತ್ತರಿಸಿದ್ದಾನೆ. ಈ ವೇಳೆ ಯುವತಿಯ ತಂದೆ ಮತ್ತು ಡೇವಿಡ್ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಕೆರಳಿದ ಡೇವಿಡ್ ತನ್ನ ಪ್ರೀತಿಗೆ ಯುವತಿಯ ತಂದೆ ಅಡ್ಡಿಯಾಗುತ್ತಿದ್ದಾನೆ ಎಂದು ಕೊಲೆಗೆ ನಿರ್ಧರಿಸಿದ್ದ.
ಹಲವು ಬಾರಿ ಯುವತಿಯ ಮನೆ ಬಳಿ ತೆರಳಿ ಕೊಲೆಗೆ ಯತ್ನಿಸಿ ವಿಫಲರಾಗಿದ್ದ ಆರೋಪಿಗಳು ಭಾನುವಾರ ರಾತ್ರಿ ಮತ್ತೆ ಹತ್ಯೆಗೆ ಸಜ್ಜಾಗಿದ್ದರು ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ