ರೌಡಿ ಜೈಲಿನಿಂದ ಹೊರಬಂದಿದ್ದಕ್ಕೆ ವಿಜಯೋತ್ಸವ ಆಚರಿಸಿದ್ರು, ಆಮೇಲೆ ಏನಾಯ್ತು ಗೊತ್ತಾ?

ಬುಧವಾರ, 28 ನವೆಂಬರ್ 2018 (14:12 IST)
ಜೈಲಿನಿಂದ ಹೊರ ಬಂದ ಕೊಲೆ ಆರೋಪಿ, ರೌಡಿಶೀಟರ್ ನಿಂದ ವಿಜಯೋತ್ಸವ ಆಚರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಂಡಿದ್ದಾರೆ.

ಕಲಬುರ್ಗಿ ನಗರದ ಮಾಂಗರವಾಡಿಯಲ್ಲಿ ಕೊಲೆ ಪ್ರಕರಣ ನಡೆದಿತ್ತು. ಕೊಲೆ ಆರೋಪದಲ್ಲಿ ಬಂಧನಕ್ಕೆ ಒಳಗಾಗಿ ಹೊರ ಬಂದಿದ್ದ ರೌಡಿಶೀಟರ್ ವಿಠ್ಯಾ ಉಪಾಧ್ಯಾಯನಿಗೆ ವಿಜಯೋತ್ಸವ ಮೂಲಕ ಸ್ವಾಗತ ಕೋರಲಾಗಿತ್ತು. ಬ್ಯಾಂಡ್-ಬಾಜಾಗಳೊಂದಿಗೆ ಕಾರಿನಲ್ಲಿ ಮೆರವಣಿಗೆ ನಡೆಸಲಾಗಿತ್ತು. ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು.

 ಈ ಘಟನೆಯಲ್ಲಿ ಮತ್ತೆ ರೌಡಿ ಶೀಟರ್ ವಿಠ್ಯಾ ಉಪದ್ಯಾಯನನ್ನು ಪೊಲೀಸರು ಬಂಧಿಸಿದ್ದಾರೆ. ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ