ಮಾಜಿ ಸಿಎಂ ನೋಡಲು ಹೊಸಕೋಟೆಯಲ್ಲಿ ನೂಕುನುಗ್ಗಲು

ಶನಿವಾರ, 6 ಆಗಸ್ಟ್ 2022 (18:55 IST)
ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹೊಸಕೋಟೆಗೆ ಪಾದಯಾತ್ರೆ ಮೂಲಕ ಹೋಗಿದ್ದಾರೆ. ಹೊಸಕೋಟೆ ತಾಲೂಕಿನ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದಲ್ಲಿ  ಶಾಸಕ ಶರತ್ ಬಚ್ಚೇಗೌಡ ಹಾಗೂ ಕಾಂಗ್ರೇಸ್ ಮುಖಂಡರು ಬೃಹತ್ ಸೇಬಿನ ಹಾರ ಹಾಕುವ ಮೂಲಕ ಮಾಜಿ ಸಿಎಂ ರನ್ನ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.
 
ಇನ್ನು ಹೊಸಕೋಟೆಯಲ್ಲಿತಮ್ಮ ನಾಯಕನಿಗೆ ಕೈಕೊಡಲು ಮತ್ತು ಸೇಬಿಗಾಗಿ ನೂರಾರು ಅಭಿಮಾನಿಗಳು ಮುಗಿಬಿದ್ದದರು.ಅಷ್ಟೇ ಅಲ್ಲದೇ  ಸಿದ್ದರಾಮಯ್ಯ ಆಗಮನದಿಂದ  ಬೆಂಗಳೂರು, ಕೋಲಾರ, ಚಿಂತಾಮಣಿ ಹಾಗೂ ಮಾಲೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಂಭವಿಸಿ ವಾಹನಸವಾರರು ಹೈರಾಣಾಗುವಂತಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ