ಆದರೆ ಇದಕ್ಕೆ ಜವಾಬ್ಧಾರಿಯುತ ಉತ್ತರ ಕೊಡುವುದು ಬಿಟ್ಟು ನಿನ್ನದೇನು ಹೆರಿಗೆ ಇದ್ರೆ ಹೇಳು, ಮಾಡಿಸ್ತೀನಿ ಎಂದು ಉಡಾಫೆಯ ಮಾತನಾಡಿದ್ದಾರೆ. ಅವರ ಹೇಳಿಕೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದು ಮಹಿಳೆಯರಿಗೇ ಮಾಡಿದ ಅವಮಾನ ಎಂದು ಕೆಲವರು ಹೇಳಿದರೆ ಉತ್ತರ ಕರ್ನಾಟಕ ಭಾಗದ ಜನರ ಪರಿಸ್ಥಿತಿ ಬಗ್ಗೆ ಪ್ರಶ್ನೆ ಎತ್ತಿದರೆ ಅದರ ಗಾಂಭೀರ್ಯತೆಯೇ ಇಲ್ಲದೆ ಉತ್ತರ ಕೊಟ್ಟಿರುವುದು ಒಬ್ಬ ಹಿರಿಯ ನಾಯಕನಿಗೆ ಶೋಭೆ ತರುತ್ತದಾ ಎಂಬ ಪ್ರಶ್ನೆ ಮೂಡಿಸಿದೆ.