ಜವಾಹರ್‌ಲಾಲ್ ನೆಹರು ತಾರಾಲಯದಲ್ಲಿ ಮೂರುದಿನಗಳ ವರೆಗೂ ವಿಜ್ಞಾನ ಪ್ರದರ್ಶನ

ಶುಕ್ರವಾರ, 18 ನವೆಂಬರ್ 2022 (18:14 IST)
ಜವಾಹರ್‌ಲಾಲ್ ನೆಹರು ತಾರಾಲಯ ಬೆಂಗಳೂರು ನಲ್ಲಿ ಕರ್ನಾಟಕ ಸರ್ಕಾರದ ನೋಂದಾಯಿತ ಸೊಸೈಟಿ ಇಂದಿನಿಂದ ಇನ್ನು ಮೂರುದಿನಗಳ ವರೆಗೂ ವಿಜ್ಞಾನ ಪ್ರದರ್ಶನವನ್ನು ಹಂಬಿಕೊಂಡಿದೆ , ಇಂದಿನಿಂದ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದ್ದು ಹಲವಾರು ಶಾಲಾ  ಕಾಲೇಜು ಮಕ್ಕಳು ಜವಾಹರ್‌ಲಾಲ್ ನೆಹರು ತಾರಾಲಯ ಭೇಟಿ ನೀಡಿದರು . ವಿಜ್ಞಾನ ಹಾಗೂ ತಂತ್ರ ಜ್ಞಾನ ದ ಅರಿವನ್ನು ಮೂಡಿಸುವ ಮತ್ತು ಮಕ್ಕಳ ಲ್ಲಿ ವಿಜ್ಞಾನದ ಆಸಕ್ತಿಗೆ ನೆರವು ನೀಡುವ ಸಲುವಾಗಿ ಈ ವಿಜ್ಞಾನ ಪ್ರದರ್ಶನವನ್ನು ನಡೆಸಲಾಗುತ್ತಿದೆ.  ಇನ್ನು ಕಾರ್ಯಕ್ರಮದಲ್ಲಿ  ಪ್ರೊ. ಅರುಣ್ ಮಂಗಳಮ್   ಹಿರಿಯ ಪ್ರಾಧ್ಯಾಪಕರು  ಭಾರತೀಯ ಖಭೌತ ಸಂಸ್ಥೆ ಸದಸ್ಯರು ಇನ್ನಿತರರು ಉಪಸ್ತಿತರಿದ್ದರು.  ಇದೆ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಕರು ಇದು ಮಕ್ಕಳಿಗೆ ಪೂರಕವಾದ ಕೆಲಸ ಎಲ್ಲಾರು ಇದರ ಪ್ರಯೋಜನ ಪಡೆಯಿರಿ ಎಂದರು . 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ