ನೂತನ ರಾಜ್ಯಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಭುಗಿಲೆದ್ದಿದೆ ಸೀಟ್ ರಾಜಕೀಯ

ಮಂಗಳವಾರ, 27 ಆಗಸ್ಟ್ 2019 (14:20 IST)
ಬೆಂಗಳೂರು : ಇಂದು ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಇದಕ್ಕೆ ಸಂಬಂಧ ಪಟ್ಟ ಪದಗ್ರಹಣ ಕಾರ್ಯಕ್ರಮದಲ್ಲಿ ಇದೀಗ ಸೀಟ್ ವಿಚಾರಕ್ಕೆ ಅಸಮಾಧಾನ ಬುಗಿಲೆದ್ದಿದೆ ಎನ್ನಲಾಗಿದೆ.




ಇಂದು ನಡೆಯುತ್ತಿರುವ ಪದಗ್ರಹಣ ಕಾರ್ಯಕ್ರಮದಲ್ಲಿ 2ನೇ ಸಾಲಿನಲ್ಲಿ ಸಿ.ಟಿ.ರವಿ, ಶ್ರೀರಾಮುಲುಗೆ ಸೀಟ್ ಮೀಸಲಿಟ್ಟಿದ್ದು, ಮುಂದಿನ ಸಾಲಿನಲ್ಲಿ ರಾಜ್ಯ ಉಸ್ತುವಾರಿ, ಸಿಎಂ, ಡಿಸಿಎಂಗಳಿಗೆ ಆಸನ ಮೀಸಲಿರಿಸಲಾಗಿದೆ.


ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸಚಿವ ಸಿ.ಟಿ.ರವಿ ಹಾಗೂ ಡಿಸಿಎಂ, ಸಚಿವ ಸ್ಥಾನದ ವಿಚಾರದಲ್ಲಿ ಮುನಿಸಿಕೊಂಡಿರುವ ಶ್ರೀರಾಮುಲುಗೆ 2ನೇ ಸಾಲಿನಲ್ಲಿ ಸೀಟು ಮೀಸಲಿಟ್ಟಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ