ಪೀಣ್ಯದಲ್ಲಿ ಸರಣಿ ಅಪಘಾತ ಕಾರಣ ಶಾಸಕರ ಬ್ಯಾನರ್?? ಏನಿದು??

ಮಂಗಳವಾರ, 26 ಜುಲೈ 2022 (17:05 IST)
ಬ್ಯಾನರ್ ತೆರೆವುಗೊಳಿಸುವ ವೇಳೆ ಸರಣಿ ಅಪಘಾತಗಳು ಸಂಭವಿಸಿದ ಘಟನೆ ನಗರದ ಪೀಣ್ಯ ಫ್ಲೈಓವರ್ ಮೇಲೆ ನಡೆದಿದೆ. ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಹುಟ್ಟುಹಬ್ಬಕ್ಕೆ ಶುಭಕೋರುವ ಬ್ಯಾನರ್ ತೆರೆವುಗೊಳಿಸುವ ನಿಟ್ಟಿನಲ್ಲಿ ಹೈವೆ ಪ್ಯಾಟ್ರೋಲ್ ವಾಹನವನ್ನು ಧಿಡೀರನೆ ನಿಲ್ಲಿಸಲಾಗಿದೆ. ಪರಿಣಾಮವಾಗಿ ಹಿಂಬದಿಯಿಂದ ಬರುತ್ತಿದ್ದ ಮೂರು ಕಾರು, ಒಂದು ಗೂಡ್ಸ್ ವಾಹನಗಳು ಪರಸ್ಪರ ಡಿಕ್ಕಿಯಾಗಿವೆ.
 
ಸೋಮವಾರ ಯಲಂಕ ಶಾಸಕ ಮತ್ತು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರ ಜನ್ಮ ದಿನದ ಪ್ರಯುಕ್ತ ಪೀಣ್ಯ ಪ್ಲೇವರ್ ಮೇಲೆ ಶುಭಕೋರುವ ಬ್ಯಾನರ್ ಅಳವಡಿಸಲಾಗಿತ್ತು. 
ಈ ಬ್ಯಾನರ್ ಅನ್ನು ತೆರವುಗೊಳಿಸಲು ಹೈವೆ ಪ್ಯಾಟ್ರೋಲ್ ವಾಹನವನ್ನು ಚಾಲಕ ಧಿಡೀರನೆ ನಿಲ್ಲಿಸಿದ್ದಾನೆ. ಈ ವೇಳೆ ಪ್ಯಾಟ್ರೋಲ್ ವಾಹನದ ಹಿಂದಿರುವ ವಾಹನಗಳ ನಡುವೆ ಸರಣಿ ಅಪಘಾತಗಳು ಸಂಭವಿಸಿವೆ. ಘಟನೆಯಲ್ಲಿ ಒಂದು ಗೂಡ್ಸ್ ವಾಹನ ಹಾಗೂ ಮೂರು ಕಾರುಗಳಿಗೆ ಹಾನಿಯಾಗಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ