ಶಾಂತಿನಗರದ ಕಾಮಗಾರಿ ಶೀಘ್ರದಲ್ಲೇ ಮುಕ್ತಾಯ

ಭಾನುವಾರ, 10 ಜುಲೈ 2022 (16:02 IST)
ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದೆ. ಈ ಹಿನ್ನೆಲೆ ಸ್ಥಳೀಯ ಶಾಸಕ ಎನ್ ಎ ಹ್ಯಾರೀಸ್ ಅವರು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹಾಗೂ ನಿಗದಿತ ಸಮಯದಲ್ಲಿ ಕಾಮಗಾರಿ ಮುಗಿಸುವಂತೆ ಸೂಚನೆ ನೀಡಿದರು.
ಬಳಿಕ ಕ್ಷೇತ್ರದಲ್ಲಿ ಫುಟ್ಬಾಲ್ ಆಟದ ಮೈದಾನದ ಅಭಿವೃದ್ಧಿ ಕೆಲಸದ ಸಂಬಂಧ ಲೆಫ್ಟಿನೆಂಟ್ ಜನರಲ್ ಬಿ ಕೆ ರೆಪ್ಸ್ವಾಲ್ ಕಮಾಂಡೆಂಟ್ ಎ ಎಸ್ ಸಿ ಸೆಂಟರ್ ಮತ್ತು ಬೆಂಗಳೂರು ಕಾಲೇಜು ಇವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ಕಾರ್ಯದರ್ಶಿ ಸತ್ಯನಾರಾಯಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ