ಕೊರೊನಾದಿಂದ ಕಂಗೆಟ್ಟಿರುವ ರಾಜ್ಯದ ಜನರಿಗೆ ಮತ್ತೆ ಆಘಾತ

ಮಂಗಳವಾರ, 21 ಸೆಪ್ಟಂಬರ್ 2021 (21:53 IST)
ಬೆಂಗಳೂರು: ಕೊರೊನಾದಿಂದ ಕಂಗೆಟ್ಟಿರುವ ರಾಜ್ಯದ ಜನರಿಗೆ ಮತ್ತೆ ಆಘಾತಕಾರಿ‌ ಸುದ್ದಿ ಹೊರಬಿದ್ದಿದೆ. ಡೆಲ್ಟಾ, ನಿಫಾ, ಬ್ಲಾಕ್ ಫಂಗಸ್ ಸೇರಿದಂತೆ ನಾನಾ‌ ರೀತಿಯ ಸಾಂಕ್ರಾಮಿಕ ರೋಗಗಳಿಂದ ಜನರು ಬೇಸತ್ತಿದ್ದಾರೆ. ಜೊತೆಗೆ ಆತಂಕದಿಂದಿದ್ದಾರೆ. ಆದ್ರೆ ರಾಜ್ಯದಲ್ಲಿ ಚಿಕೂನ್ ಗುನ್ಯಾ ಹಾಗೂ ಡೆಂಗ್ಯೂ ಪ್ರಕರಣಗಳು ಜಾಸ್ತಿ ಆಗುತ್ತಿರುವುದು ಆರೋಗ್ಯ ಇಲಾಖೆಯ ಆತಂಕಕ್ಕೆ‌ ಕಾರಣವಾಗಿದೆ. ಬರೋಬ್ಬರಿ 893 ಡೆಂಗ್ಯೂ ಕೇಸ್ ಪತ್ತೆಯಾಗಿದ್ದರೆ, ಸಿಲಿಕಾನ್ ಸಿಟಿ ಬೆಂಗಳೂರು ಒಂದರಲ್ಲೇ 446 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿವೆ. ಅರ್ಧದಷ್ಟು ಪ್ರಕರಣಗಳು ಇಲ್ಲಿ ಇರುವುದು ಬೆಂಗಳೂರಿಗರ ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
 
ಉಡುಪಿ 293, ಶಿವಮೊಗ್ಗ 202, ದಕ್ಷಿಣ ಕನ್ನಡ 178, ಕಲ್ಬುರ್ಗಿ 280,
ಕೊಪ್ಪಳ 150, ದಾವಣಗೆರೆ 120, ಬಳ್ಳಾರಿಯಲ್ಲಿ 113, ಹಾವೇರಿಯಲ್ಲಿ 100 ಕೇಸ್ ದೃಢಪಟ್ಟಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ