ಬೆಂಗಳೂರು: ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಮೊಮ್ಮಗನ ಮದುವೆಯಲ್ಲಿ ಸಿಎಂ ಸಿದ್ದರಾಮಯ್ಯ ಆದಿಯಾಗಿ ಕಾಂಗ್ರೆಸ್ ನಾಯಕರ ದಂಡೇ ಆಗಮಿಸಿತ್ತು. ಇದಕ್ಕೆ ನೆಟ್ಟಿಗರು ಒಳಗೊಳಗೆ ಎಲ್ಲಾ ಚೆನ್ನಾಗೇ ಇರ್ತೀರಾ ಎಂದು ಸಖತ್ ಟಾಂಗ್ ಕೊಟ್ಟಿದ್ದಾರೆ.
ಯಡಿಯೂರಪ್ಪ ಪುತ್ರ ಸಂಸದ ಬಿವೈ ರಾಘವೇಂದ್ರ ಮಗನ ಮದುವೆ ಕಾರ್ಯಕ್ರಮಕ್ಕೆ ರಾಜಕೀಯ ಮಾತ್ರವಲ್ಲದೆ ಸಿನಿಮಾ ಗಣ್ಯರೂ ಆಗಮಿಸಿದ್ದರು. ಬಂದ ಗಣ್ಯರೆಲ್ಲರನ್ನೂ ಶಾಲು ಹೊದೆಸಿ ಯಡಿಯೂರಪ್ಪ ಕುಟುಂಬ ಗೌರವಿಸಿತ್ತು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಜಮೀರ್ ಅಹ್ಮದ್ ಸೇರಿದಂತೆ ಪಕ್ಷಬೇಧ ಮರೆತು ಎಲ್ಲಾ ನಾಯಕರೂ ಪಾಲ್ಗೊಂಡಿದ್ದರು. ಸಿಎಂ ಸಿದ್ದರಾಮಯ್ಯಗೆ ಶಾಲು ಹೊದೆಸಿ ಸನ್ಮಾನಿಸಿದ ಬಿವೈ ರಾಘವೇಂದ್ರ ಕಾಲು ಮುಟ್ಟಿ ನಮಸ್ಕಾರವನ್ನೂ ಮಾಡಿದ್ದಾರೆ. ಬಳಿಕ ಯಡಿಯೂರಪ್ಪ ಕುಟುಂಬ ಒಟ್ಟಾಗಿ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ರಾಜಕೀಯ ಏನೇ ಇದ್ದರೂ ಯಡಿಯೂರಪ್ಪ ಜೊತೆಗೆ ಸಿದ್ದರಾಮಯ್ಯ ಉತ್ತಮ ಸಂಬಂಧವನ್ನೇ ಹೊಂದಿದ್ದಾರೆ. ಆದರೆ ಇದಕ್ಕೆ ನೆಟ್ಟಿಗರು ಟಾಂಗ್ ಕೊಟ್ಟಿದ್ದಾರೆ. ಹಿಂದಿನಿಂದ ಸಿದ್ದರಾಮಯ್ಯ ಹಾಗೆ, ಹೀಗೇ ಎಂದು ಟೀಕೆ ಮಾಡ್ತೀರಿ, ಈಗ ನೋಡಿದ್ರೆ ಖುಷಿ ಖುಷಿಯಾಗಿ ಪೋಸ್ ಕೊಡ್ತೀರಿ ಎಂದು ಕಾಲೆಳೆದಿದ್ದಾರೆ.