ಶಾಲಾ ಮಕ್ಕಳ ಜತೆ ಊಟ ಸವಿದ ಸಿದ್ದರಾಮಯ್ಯ, ಮುಖ್ಯಮಂತ್ರಿಯ ಸರಳತೆಗೆ ಮೆಚ್ಚುಗೆ

Sampriya

ಶುಕ್ರವಾರ, 5 ಜುಲೈ 2024 (19:41 IST)
Photo Courtesy X
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಆಗಾಗ ತಮ್ಮ ಸರಳತೆಯ ಮೂಲಕ ಎಲ್ಲರ ಮನಸ್ಸನ್ನು ಗೆಲ್ಲುತ್ತಿರುತ್ತಾರೆ. ಇದೀಗ ಇಂದು ಶಾಲಾ ಮಕ್ಕಳ ಜತೆ ಊಟ ಸವಿದು, ಅವರಿಗೆ ಪಾಠ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಮತ್ತೇ ಅದೇ ಸರಳತೆ ಮೆರೆದಿದ್ದಾರೆ.

ಇಂದು ವಿಧಾನ ಸೌಧದಲ್ಲಿ ಸಭೆಯ ಬಳಿಕ ಸಿದ್ದರಾಮಯ್ಯ ಅವರು ಚಾಮರಾಜಪೇಟೆಯಲ್ಲಿರುವ ಮೊರಾರ್ಜಿ ದೇಸಾಯಿ ಶಾಲೆಗೆ ಭೇಟಿ ಮಕ್ಕಳ ಜತೆ ಸಮಯ ಕಳೆದರು.  ಮೊದಲಿಗೆ ಮಕ್ಕಳೊಂದಿಗೆ ಆಟಪಾಟದಲ್ಲಿ ಪಾಲ್ಗೊಂಡ ಸಿದ್ದರಾಮಯ್ಯ ಸ್ವಲ್ಪ ಹೊತ್ತು ಮೇಷ್ಟ್ರು ಕೂಡ ಆಗಿದ್ದರು.

ಮಕ್ಕಳಿಗೆ ಕನ್ನಡ ಭಾಷೆಗೆ ಸಂಬಂಧಿಸಿದ ಕೆಲ ಪ್ರಶ್ನೆಗಳನ್ನು ಕೇಳಿ ಅವರ ಜತೆ ಸಮಯ ಕಳೆದರು. ಅದಲ್ಲದೆ ಮಧ್ಯಾಹ್ನ ಮಕ್ಕಳ ಜತೆ ಊಟ ಸವಿದರು. ಇನ್ನೂ ಅಡುಗೆ ಮಾಡಿದ ಮಹಿಳೆಯರನ್ನು ಕರೆದು ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕಿತ್ತು, ಹಾಗೆಯೇ ಅನ್ನವನ್ನೂ ಇನ್ನಷ್ಟು ಬೇಯಿಸಿದರೆ ಚೆನ್ನಾಗಿರುತ್ತದೆ ಎಂದು ಸಲಹೆ ನೀಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ