ಅಮಿತ್ ಶಾ, ಮೋದಿ ಎಷ್ಟು ಬಾರಿ ಬಂದರೂ ಏನೂ ಆಗಲ್ಲ – ಸಿಎಂ ವಾಗ್ದಾಳಿ

ಭಾನುವಾರ, 25 ಮಾರ್ಚ್ 2018 (10:50 IST)
ಮೈಸೂರು : ‘ಅಮಿತ್ ಶಾ, ಮೋದಿ ಎಷ್ಟು ಬಾರಿ ಬಂದರೂ ಏನೂ ಆಗಲ್ಲ. 100 ಬಾರಿ ರಾಜ್ಯಕ್ಕೆ ಬಂದರೂ ಏನು ಮಾಡಲು ಸಾಧ್ಯವಿಲ್ಲ’ ಎಂದು ಸಿಎಂ ಸಿದ್ದರಾಮಯ್ಯ  ಅಮಿತ್ ಶಾ ಹಾಗೂ  ಮೋದಿ ಅವರ ವಾಗ್ದಾಳಿ ಮಾಡಿದ್ದಾರೆ.


ರಾಹುಲ್ ಗಾಂಧಿ ಅವರು ಪ್ರವಾಸದ ಬಗ್ಗೆ ಮಾತನಾಡಿದ ಅವರು, ’ರಾಹುಲ್ ಗಾಂಧಿ ಪ್ರವಾಸಕ್ಕೆ ನಿನ್ನೆ ಅದ್ದೂರಿ ಪ್ರತಿಕ್ರಿಯೆ ಸಿಕ್ಕಿದೆ. ಮೈಸೂರಿನಲ್ಲೂ ಉತ್ತಮ ಪ್ರತಿಕ್ರಿಯೆ ದೊರೆಯಲಿದೆ. ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರೋದು ನಾವೇ. ಕರಾವಳಿಯಲ್ಲಿ ಕೋಮುವಾದದ ಕೇಂದ್ರ ಮಾಡಲು ಹೊರಟ್ಟಿದ್ದರು. ಅಲ್ಲಿಯೂ ನಮ್ಮ ಜನಾಶೀರ್ವಾದ ಯಾತ್ರೆ ಯಶಸ್ವಿಯಾಗಿದೆ. ಕಳಂಕಿತರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದರೆ ಜನಕ್ಕೆ ಅರ್ಥ ಆಗಲ್ವ. ಅಥಣಿಯಿಂದ ಮಂಡ್ಯವರೆಗೂ ಜನಾಶೀರ್ವಾದ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದರ ಅರ್ಥ ಜನ ನಮ್ಮ ಪರವಾಗಿದ್ದಾರೆ ಅನ್ನೋದಕ್ಕೆ ಸಾಕ್ಷಿ’ ಎಂದು ಸಿಎಂ ಸಿದ್ದರಾಮಯ್ಯ  ಅವರು ಭಾನುವಾರ(ಇಂದು) ಮೈಸೂರಿನಲ್ಲಿ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ