ಶಾಸಕ ಗಣೇಶ್ ಬಿಜೆಪಿಗೆ ಸೇರ್ಪಡೆ ಪಕ್ಷಕ್ಕೆ ಬಿಟ್ಟ ವಿಚಾರ ಎಂದ ಸೋಮಶೇಖರ ರೆಡ್ಡಿ

ಭಾನುವಾರ, 27 ಜನವರಿ 2019 (15:30 IST)
ಬಳ್ಳಾರಿ ಜಿಲ್ಲೆಯ ಕಂಪ್ಲಿ ಶಾಸಕ ಗಣೇಶ್ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ವಿಚಾರ ಪಕ್ಷದ ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದ ಶಾಸಕ ಹೇಳಿದ್ದಾರೆ.

ಪಕ್ಷಕ್ಕೆ ಯಾರೇ ಬಂದರೂ ನಾನು ಪಕ್ಷದ ಹಿನ್ನಲೆಯಲ್ಲಿ ಸ್ವಾಗತಿಸಬೇಕಾಗುತ್ತದೆಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ಪ್ರತಿಕ್ರಿಯಿಸಿದ್ದಾರೆ.

ಬಳ್ಳಾರಿ ನಗರದ ಒಂದನೇ ವಾರ್ಡಿನಲ್ಲಿ ಶಾಸಕರ ಅನುದಾನದಡಿ ಗ್ರಾಮೀಣಾಭಿವೃದ್ಧಿ ಇಲಾಖೆ ಸ್ಥಾಪಿಸಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಪಕ್ಷಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು, ಬಿಡಬೇಕು ಎಂಬ ವಿಚಾರ ಪಕ್ಷದ ಉನ್ನತ ನಾಯಕರಿಗೆ ಬಿಟ್ಟಿದ್ದು ಎಂದಷ್ಟೇ ಹೇಳಿದರು.

ರಾಜ್ಯ ಸರ್ಕಾರ ಮುಂದಿನ ತಿಂಗಳು ಮಂಡಿಸಲಿರುವ ಬಜೆಟ್ ಹೆಚ್ಚಿನದಾಗಿ ರೈತ ಹಿತಾಸಕ್ತಿಗೆ ಅನುಗುಣವಾಗಿರಲಿ ಎಂದರು. ಹತ್ತು ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿರುವ ನೀರಿನ ಘಟಕ 2 ಸಾವಿರ ಲೀಟರ್ ಸಾಮರ್ಥ್ಯವನ್ನು ಹೊಂದಿದ್ದು ಐದು ರೂಪಾಯಿ ನಾಣ್ಯ ಇಲ್ಲವೇ ಎಟಿಎಂ ಕಾರ್ಡ್ ಬಳಸಿ ನಾಗರೀಕರು ನೀರು ಪಡೆಯಬಹುದೆಂದುರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ