ಸುಮಲತಾ ಕನ್ನಡದ ಮಗಳು ಎಂದ ಬಿಜೆಪಿ ಸಂಸದೆ

ಶನಿವಾರ, 9 ಮಾರ್ಚ್ 2019 (17:28 IST)
ಗಂಡ ಸತ್ತ ಹೆಣ್ಮಕ್ಕಳು ಆಚೆ ಬರಬಾರದಾ? ರಾಜಕೀಯಕ್ಕೆ ಬರಬಾರದಾ? ಸಚಿವ ರೇವಣ್ಣನ ಅಸಂಬದ್ಧ ಹೇಳಿಕೆ ಮತ್ತು ಕೀಳು ಮಟ್ಟದ ಮಾತುಗಳಿಗೆ ಅವರು ಕ್ಷಮೆ ಕೇಳಬೇಕೆಂದು ಬಿಜೆಪಿ ಸಂಸದೆ ಆಗ್ರಹ ಮಾಡಿದ್ದಾರೆ.

ಮಂಗಳೂರಿನಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದು, ಸುಮಲತಾ ಅವರು ಕನ್ನಡದ ಮಗಳು, ಕನ್ನಡದ ಸೊಸೆಯಾಗಿದ್ದಾರೆ. ಕಳೆದ ಮೂರು ದಶಕಗಳಲ್ಲಿ ಇಲ್ಲೇ ನೆಲೆಸಿ ನನ್ನ ರಾಜ್ಯ ಅಂತ ಇಲ್ಲಿದ್ದಾರೆ. ಅಂಬರೀಶ್ ಸತ್ತಾಗ ರೇವಣ್ಣ ನಡೆದುಕೊಂಡ ರೀತಿ ಹಾಗಾದ್ರೆ ಮೊಸಳೆ ಕಣ್ಣೀರಾ? ಎಂದ ಅವರು, ರಾಜಕೀಯವನ್ನ ರಾಜಕೀಯವಾಗಿ ಎದುರಿಸಿ ಈ ರೀತಿ ಬೇಡ ಎಂದು ಸಲಹೆ ನೀಡಿದರು.

ತಕ್ಷಣ ರೇವಣ್ಣ ಕ್ಷಮೆ ಯಾಚಿಸಿ ಮಾತು ವಾಪಾಸ್ ಪಡೆಯಲಿ ಎಂದ ಅವರು, ಸುಮಲತಾಗೆ ಬೆಂಬಲ ನೀಡುವ ಬಗ್ಗೆ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ. ನನ್ನ ಕ್ಷೇತ್ರ ಗೆಲ್ಲುವ ಕ್ಷೇತ್ರವಾದ ಕಾರಣ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಮಂಡ್ಯ, ಹಾಸನ ಅಂದ್ರೆ ಯಾರೂ ಟಿಕೆಟ್ ಕೇಳಲ್ಲ. ಹೀಗಾಗಿ ಆಸೆ ಪಡೋದು ತಪ್ಪಲ್ಲ, ವರಿಷ್ಠರು ನಿರ್ಧಾರ ಮಾಡ್ತಾರೆ ಎಂದ್ರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ