ಪಕ್ಕಾ ಪ್ಲಾನ್ ಪ್ರಕಾರ ನಡೆದಿದ್ದರೆ ಗೌರಿ ಲಂಕೇಶ್ ಗೂ ಮೊದಲೇ ಸುನಿಲ್ ಹತ್ಯೆಯಾಗಬೇಕಿತ್ತು!

ಶನಿವಾರ, 9 ಡಿಸೆಂಬರ್ 2017 (08:10 IST)
ಬೆಂಗಳೂರು: ಪಕ್ಕಾ ಯೋಜನೆ ಪ್ರಕಾರ ಎಲ್ಲವೂ ನಡೆದಿದ್ದರೆ ವಿಚಾರವಾದಿ, ಪತ್ರಕರ್ತೆ ಗೌರಿ
ಲಂಕೇಶ್ ರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಕ್ಕಿಂತ ಮೊದಲೇ ಸುನಿಲ್ ಹೆಗ್ಗರವಳ್ಳಿ ಹತ್ಯೆಯಾಗಬೇಕಿತ್ತು.
 

ಆದರೆ ಸುನಿಲ್ ಅದೃಷ್ಟವೋ ಏನೋ ಎಂಬಂತೆ ಎರಡು ಬಾರಿ ಯೋಜನೆ ತಲೆ ಕೆಳಗಾಗಿ ಸುನಿಲ್ ಬಚವಾಗಿದ್ದರು. ಸುಪಾರಿ ಪಡೆದಿದ್ದ ಶಶಿಧರ್ ಆಗಸ್ಟ್ ತಿಂಗಳಲ್ಲೇ ಸುನಿಲ್ ಮನೆ ಸುತ್ತ ಮುತ್ತ ಸುಳಿದಾಡಿ ಹತ್ಯೆ ಸಂಚು ರೂಪಿಸಿದ್ದನಂತೆ.

ಆದರೆ ಮನೆಯ ಮುಂದೆ ಸಿಸಿಟಿವಿ ಕ್ಯಾಮರಾಗಳನ್ನು ನೋಡಿ ಸಿಕ್ಕಿ ಬೀಳಬಹುದೆಂಬ ಭಯದಿಂದ ಕೊಲ್ಲಲೆಂದು ಬಂದವನು ಬರಿಗೈಯಲ್ಲಿ ವಾಪಸಾಗಿದ್ದ ಎಂದು ಸುನಿಲ್ ಹೆಗ್ಗರವಳ್ಳಿ ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡುತ್ತಾ ಹೇಳಿದ್ದಾರೆ.

ಗೌರಿ ಹತ್ಯೆಯಾಗಿದ್ದು ಸೆಪ್ಟೆಂಬರ್ 5 ರಂದು. ಒಂದು ವೇಳೆ ಸುಪಾರಿ ಕಿಲ್ಲರ್ ಶಶಿಧರ್ ಯೋಜನೆ ಪಕ್ಕಾ ಆಗಿ ಕೆಲಸ ಮಾಡಿದ್ದರೆ ಆಗಸ್ಟ್ 28 ರಂದೇ ಸುನಿಲ್ ಹತ್ಯೆಯಾಗಿರುತ್ತಿತ್ತು. ನನ್ನ ಪುಣ್ಯವೋ, ತಂದೆ ತಾಯಿಯ ಆಶೀರ್ವಾದವೋ ಬದುಕುಳಿದಿದ್ದೆ ಎಂದು ಸುನಿಲ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ