ಆನಂದ್ ಸಿಂಗ್ ರಾಜೀನಾಮೆ ವಾಪಾಸ್ ಪಡೆಯಲು ಈ 2 ಬೇಡಿಕೆಗಳನ್ನ ಸರ್ಕಾರ ಈಡೇರಿಸಬೇಕು ಎಂದ ಬೆಂಬಲಿಗರು

ಬುಧವಾರ, 3 ಜುಲೈ 2019 (10:11 IST)
ಬೆಂಗಳೂರು : ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ಅವರು ರಾಜೀನಾಮೆ ಹಿಂಪಡೆಯಬೇಕೆಂದರೆ ಸರ್ಕಾರ 2 ಬೇಡಿಕೆಗಳನ್ನ ಈಡೇರಿಸಬೇಕೆಂದು ಆನಂದ್ ಸಿಂಗ್ ಅವರ  ಬೆಂಬಲಿಗರು ಆಗ್ರಹಿಸಿದ್ದಾರೆ.




ಶಾಸಕ ಆನಂದ್ ಸಿಂಗ್ ಬೆಂಬಲಕ್ಕೆ ನಿಂತ ಆಪ್ತರು ಮತ್ತು ಬೆಂಬಲಿಗರು ವಿಜಯನಗರ ಕ್ಷೇತ್ರದ ಬೆಳವಣೆಗೆಗಾಗಿ ಶಾಸಕರು ರಾಜೀನಾಮೆ ನೀಡಿರುವುದು ಸೂಕ್ತ. ಶಾಸಕರ ಈ 2 ಬೇಡಿಕೆಗಳನ್ನ ಈಡೇರಿಸಬೇಕೆಂದು, ಒಂದು ವೇಳೆ ಬೇಡಿಕೆಗಳು ಈಡೇರಿಸಿದ್ರೆ ರಾಜಿನಾಮೆ ವಾಪಾಸ್ ಪಡೆಯುವುದಾಗಿ ಶಾಸಕರ ಪರ ಬೆಂಬಲಿಗರು ತಿಳಿಸಿದ್ದಾರೆ.


ವಿಜಯ ನಗರ ಜಿಲ್ಲೆಗಾಗಿ ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಆದ್ರೆ ವಿಜಯನಗರ ಜಿಲ್ಲೆಯ ಬಗ್ಗೆ ತೀರ್ಮಾನವಾಗಿಲ್ಲ. ಹಾಗೇ ಜಿಂದಾಲ್  ನಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ನೀಡಬೇಕು. ಈ 2 ಬೇಡಿಕೆಗಳನ್ನ ಸರ್ಕಾರ ಈಡೇರಿಸಬೇಕೆಂದು ಬೆಂಬಲಿಗರು ಆಗ್ರಹಿಸಿದ್ದಾರೆ ಎನ್ನಲಾಗಿದೆ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ