ಭವಬಂಧನಗಳಿಂದ ಬೇಸತ್ತು, ವೈರಾಗ್ಯ ಮನೋಭಾವ ಬರುತ್ತಿದ್ದಂತೆ ಸಾಮಾನ್ಯವಾಗಿ ಸನ್ಯಾಸತ್ವ ತ್ಯಜಿಸುತ್ತಾರೆ. ಆದರೆ ಕಲಬುರಗಿಯ ಸ್ವಾಮಿಯೊಬ್ಬರಿಗೆ ಬಂದ ವೈರಾಗ್ಯ ಮಾಸಿಹೋಗಿದೆ ಎನ್ನಿಸುತ್ತದೆ. ಪೀಠಾಧಿಪತಿಯಾಗಿರುವ ಅವರು ಸಂಸಾರ ಜೀವನಕ್ಕೆ ಕಾಲಿಟ್ಟಿದ್ದಾರೆ.
ಹೌದು, ಕಲಬುರಗಿಯ ಶರಣಬಸವೇಶ್ವರ ಮಠದ ಪ್ರಣವಾನಂದ ಸ್ವಾಮೀಜಿ ಸೋಮವಾರ ಮುಂಜಾನೆ ವಿವಾಹ ಬಂಧನಕ್ಕೆ ಕಾಲಿಟ್ಟಿದ್ದಾರೆ. ಸ್ವಾಮೀಜಿ ಮೂಲತಃ ಕೇರಳದವರೆಂದು ಹೇಳಲಾಗುತ್ತಿದ್ದು ಅಲ್ಲಿಯದೇ ಯುವತಿ, ಸಿಎ ಎರಡನೇ ಸೆಮಿಸ್ಟರ್ ವಿದ್ಯಾರ್ಥಿನಿ ಮೀರಾಳನ್ನು ವಿವಾಹವಾಗಿದ್ದಾರೆ. ಈ ವಿವಾಹ ಸಮಾರಂಭಕ್ಕೆ ಭಕ್ತ ಸಮೂಹ, ಹಲವು ಮಠಾಧೀಶರು, ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಕಾರ್ಯಕರ್ತರು ಭಾಗಿಯಾಗಿದ್ದಾರೆ.