ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧ ಮಠದ ಸ್ವಾಮೀಜಿಯ ಅಕ್ರಮ ಸಂಬಂಧ ಬಟ್ಟ ಬಯಲು

ಬುಧವಾರ, 18 ಸೆಪ್ಟಂಬರ್ 2019 (10:11 IST)
ಯಾದಗಿರಿ : ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹುಣಸಿಹೊಳಿ ಗ್ರಾಮದ ಪ್ರಸಿದ್ಧ ಮಠದ ಸ್ವಾಮೀಜಿಯೊಬ್ಬರ ಅಕ್ರಮ ಸಂಬಂಧ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.




ಕಣ್ವಮಠ, ಪೀಠಾಧಿಪತಿ ಶ್ರೀ ವಿದ್ಯಾವಾರೀಧಿತೀರ್ಥ ಸ್ವಾಮಿಯು ಮೈಸೂರು ಮೂಲದ ಮಹಿಳೆಯನ್ನು ಮಂಚಕ್ಕೆ ಕರೆದಿದ್ದು, ಇದಕ್ಕೆ ಸಂಬಂಧಪಟ್ಟ ವಾಟ್ಸಪ್ ಚಾಟಿಂಗ್, ವೀಡಿಯೋಗಳು ಮತ್ತು ಕಾಲ್ ರೆಕಾರ್ಡ್ ಅನಾಮಧೇಯ ವ್ಯಕ್ತಿಗಳಿಂದ ಬಹಿರಂಗಗೊಂಡಿದೆ.


ಈಗಾಗಲೇ ಎರಡು ಮದುವೆ ಆಗಿರುವ ಸ್ವಾಮೀಜಿ ಮೇಲೆ ಕಣ್ವ ಮಠದ ಆಸ್ತಿಯನ್ನು, ಅಕ್ರಮವಾಗಿ ಮಾರಾಟ ಮಾಡಿರುವ ಆರೋಪವಿದೆ. ಇದೀಗ ಅವರ ಈ ಕಾಮಪುರಾಣ ಬಟ್ಟಬಯಲಾಗಿದ್ದರೂ, ಇದನ್ನು ಅಲ್ಲಗಳೆದ ಸ್ವಾಮೀಜಿ ಪೀಠ ತ್ಯಾಗಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ