ಜಾರಕಿಹೊಳಿ ಅವರ ಮೇಲೆ ಮಾಡಿದ ಆಪಾದನೆ ರಾಜಕೀಯ ಪ್ರೇರಿತ

ಭಾನುವಾರ, 4 ಡಿಸೆಂಬರ್ 2022 (14:03 IST)
ಸಚಿವ ಸ್ಥಾನ, ಅಧಿಕಾರದ ಆಸೆ ಬೇರೆ, ಪಕ್ಷದ ಕೆಲಸ ಬೇರೆ.ನಾವು ಅವರ ಜತೆ ಚರ್ಚಿಸಿರುವ ಪ್ರಕಾರ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಬಗ್ಗೆ ಜಾರಕಿಹೊಳಿ ಚರ್ಚೆ ನಡೆಸ್ತಿದಾರೆ ಎಂದು ಮಹೇಶ್ ಕುಮಟಳ್ಳಿ ಹೇಳಿದ್ದು,ಅವರನ್ನು ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳುವ ವಿಚಾರ ಬೇರೆ.ಅವರು ಯಾವತ್ತೂ ಅಧಿಕಾರ ಬೇಕು ಅಂತ ಕೇಳಿಲ್ಲ.ಪಕ್ಷದ ವರಿಷ್ಠರು ಏನು ನಿರ್ಧಾರ ತಗೋತಾರೋ ಅದಕ್ಕೆ ಅವರು ಬದ್ಧ.ಸದ್ಯಕ್ಕೆ ನಮ್ಮ ಗಮನ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದಾಗಿದೆ.
 
ಜೆಡಿಎಸ್ ನವರ ಜತೆ ಸಂಪರ್ಕದಲ್ಲಿ ಇದ್ದಾರೆ ಎನ್ನಲಾದ ವಿಚಾರವಾಗಿ ಪ್ರತಿಕ್ರಿಯಿಸಿದ್ದು,ನಾವು ಯಾರ ಜತೆಗೂ ಸಂಪರ್ಕ ಇಲ್ಲ.ಇದೇ 17,18 ರಂದು ನನ್ನ ಮಗನ ಆರತಕ್ಷತೆ ಕಾರ್ಯಕ್ರಮ ಇದೆ.ನಮ್ಮ ಪಕ್ಷದವರನ್ನೂ ಆಹ್ವಾನ ಕೊಡ್ತೇನೆ.ಸಿದ್ದರಾಮಯ್ಯ, ಎಚ್ಡಿಕೆ ಅವರನ್ನೂ ಆಹ್ವಾನಿಸ್ತೇನೆ ಎಂದು ಮಹೇಶ್ ಕುಮಟಳ್ಳಿ ಹೇಳಿದ್ರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ