ಭೀಮಾತೀರದ ನಿಗೂಢ ಹತ್ಯೆ ಪ್ರಕರಣ: ಆರೋಪಿಗಳು ಕೋರ್ಟಗೆ ಹಾಜರ್

ಮಂಗಳವಾರ, 24 ಜುಲೈ 2018 (17:28 IST)
ಭೀಮಾತೀರದ ಗಂಗಾಧರ ಚಡಚಣ ನಿಗೂಢ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ಎಲ್ಲ 13 ಜನ ಆರೋಪಿಗಳು ಇಂಡಿ ಕೋರ್ಟ್ ಗೆ ಹಾಜರುಪಡಿಸಲಾಗಿದೆ.

ಪ್ರಕರಣದ ಪ್ರಮುಖ ಆರೋಪಿ ಮಹಾದೇವ ಸಾಹುಕಾರ್, ಪಿಎಸ್ಐ ಗೋಪಾಲಗೌಡರು ಹಳ್ಳೂರ್ ಸೇರಿದಂತೆ 13 ಜನ ಹಾಜರು ಆಗಿದ್ದಾರೆ. ಇಂಡಿ ಜೆಎಂಎಫ್ ಸಿ  ಕೋರ್ಟ್ ಗೆ ಆರೋಪಿಗಳು ವಿಚಾರಣೆಗೆ ಹಾಜರಾಗಿದ್ದಾರೆ.
ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ಇದ್ದ ಆರೋಪಿಗಳನ್ನು ಬಿಗಿ ಭದ್ರತೆಯಲ್ಲಿ ಕರೆದೊಯ್ದ ಡಿಆರ್ ಪೊಲೀಸರು. ಎರಡು ಪ್ರತ್ಯೇಕ ವಾಹನಗಳಲ್ಲಿ ಆರೋಪಿಗಳನ್ನು ಕೋರ್ಟಗೆ ಕರೆತರಲಾಯಿತು.

ಇವತ್ತು ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಮುಗಿದ ಹಿನ್ನೆಲೆ ಕೋರ್ಟ್ ಗೆ ಹಾಜರು ಪಡಿಸಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ