ಮೊಬೈಲ್ ಬಳಸಿ ನಕಲು - ಪ್ರಾಂಶುಪಾಲರಿಗೆ ಕತ್ತರಿಯಿಂದ ಇರಿದ ವಿದ್ಯಾರ್ಥಿ

ಶನಿವಾರ, 7 ಡಿಸೆಂಬರ್ 2019 (19:57 IST)
ಬಿಎ ಪ್ರಥಮ ವರ್ಷದ ವಿದ್ಯಾರ್ಥಿಯೊಬ್ಬ ನಕಲು ಮಾಡೋವಾಗ ಸಿಕ್ಕಿ ಬಿದ್ದು ಪ್ರಾಂಶುಪಾಲರಿಗೆ ಕತ್ತರಿಯಿಂದ ಹಲ್ಲೆ ನಡೆಸಿದ್ದಾನೆ.

ಗುಜರಾತ್ ಗಾಂಧಿನಗರದ ವಿಎಂ ಮೆಹ್ತಾ ಕಾಲೇಜಿನಲ್ಲಿ ಸೌರಾಷ್ಟ್ರ ವಿವಿ ಪರೀಕ್ಷೆಗಳು ನಡೆಯುತ್ತಿದ್ದವು. ಆಗ ಮೊಬೈಲ್ ಬಳಕೆ ಮಾಡಿ ನಕಲು ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಸಿಕ್ಕಿ ಬಿದ್ದನು.

ಪ್ರಾಂಶುಪಾಲರು ಆತನ ವಿರುದ್ಧ ಕ್ರಮ ಕೈಗೊಳ್ಳೋದಕ್ಕೆ ಮುಂದಾದಾಗ ಭಯಗೊಂಡಿದ್ದ ವಿದ್ಯಾರ್ಥಿ ಅಲ್ಲೇ ಇದ್ದ ಕತ್ತರಿಯಿಂದ ಪ್ರಾಂಶುಪಾಲರ ಮೇಲೆ ಗಂಭೀರ ದಾಳಿ ನಡೆಸಿದ್ದಾನೆ.

ಕೂಡಲೇ ಗಾಯಾಳುವನ್ನು ಸಿಬ್ಬಂದಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ