ಅಧಿಕಾರ ಹಂಚಿಕೆ ಮಾಡಿದ್ರೆ ಪಕ್ಷ ಉಳಿಯುತ್ತೆ ಎಂದ ಕಾಂಗ್ರೆಸ್ ಮುಖಂಡ

ಮಂಗಳವಾರ, 21 ಜನವರಿ 2020 (20:15 IST)
ಕಾಂಗ್ರೆಸ್ ನಲ್ಲಿ ಅಧಿಕಾರ ಹಂಚಿಕೆ ಮಾಡಿದರೆ ಮಾತ್ರ ಪಕ್ಷ ಉಳಿಯೋಕೆ ಸಾಧ್ಯ.

ಹೀಗಂತ ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದು, ಪಕ್ಷದಲ್ಲಿ ಹಿರಿಯ ಮುಖಂಡರು ಹೆಚ್ಚಿದ್ದಾರೆ. ಹೀಗಾಗಿ ಪಕ್ಷದ ಮುಖಂಡರಿಗೆ ಅಧಿಕಾರ ಹಂಚಿಕೆ ಮಾಡಿದರೆ ಅದರಿಂದ ಪಕ್ಷಕ್ಕೆ ಹೆಚ್ಚು ಲಾಭವಾಗಲಿದೆ ಅಂತ ಹೇಳಿದ್ದಾರೆ.

ಪಕ್ಷದ ಬಲವರ್ಧನೆ ನಿಟ್ಟಿನಲ್ಲಿ ಅಧಿಕಾರ ವಿಕೇಂದ್ರಿಕರಣ ಆಗಬೇಕಿದೆ. ಸಿಎಲ್ ಪಿ ಹಾಗೂ ವಿಪಕ್ಷ ನಾಯಕನ ಸ್ಥಾನಗಳನ್ನು ಬೇರ್ಪಡಿಸೋಕೆ ಹೈಕಮಾಂಡ್ ಇದೆ ಅಂತ ಮಾರ್ಮಿಕವಾಗಿ ಟಾಂಗ್ ನೀಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ