ಅಂಡರ್ ಪಾಸ್ ಕೆಳಗೆ ನೀರು ತೆರವು ಮಾಡದೇ ಪಾಲಿಕೆ ನಿರ್ಲಕ್ಷ್ಯ

ಬುಧವಾರ, 8 ನವೆಂಬರ್ 2023 (14:23 IST)
ರಾತ್ರಿ ಸುರಿದ ಮಳೆಗೆ ನಗರದ ಶಾಂಗ್ರಿಲಾ ಹೋಟೆಲ್ ಹಿಂದೆ ಇರುವ ಅಂಡರ್ ಪಾಸ್ ಜಾಲಾವೃತವಾಗಿದೆ. ಸಿಎಂ ಕೃಷ್ಣಾ ನಿವಾಸದ ಹತ್ತಿರ ಇರುವ ಅಂಡರ್ ಪಾಸ್ ನಲ್ಲಿ ನೀರು ತೆರವು ಮಾಡುವ ಕೆಲಸ ಪಾಲಿಕೆ ಮಾಡಿಲ್ಲ.ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆಲ್ಲ ಕಾರಣವಾಗಿದೆ.
 
ಅಂಡರ್ ಪಾಸ್ ಮುಂದೆ ಬ್ಯಾರಿಕೆಡ್ ಸಹ  ಅಧಿಕಾರಿಗಳು ಹಾಕಿಲ್ಲ.ಹೆಸರಿಗೆ ಮಾತ್ರ ಬ್ಯಾರಿಕೆಡ್ ಗಳು ಹಾಕಲಾಗಿದೆ.ಬ್ಯಾರಿಕೆಡ್ ಹಾಕಿದ ಜಾಗದಲ್ಲಿ ಪೊಲೀಸರ ನಿಯೋಜನೆ ಮಾಡಿಲ್ಲ .ಹೀಗಾಗಿ ಜನರು ನೀರು ಇಲ್ಲಾ ಅಂತ ಅಂಡರ್ ಪಾಸ್ ಒಳಗೆ ಸಂಚಾರಿಸುತ್ತಿದ್ದಾರೆ.ಅಂಡರ್ ಪಾಸ್ ಒಳಗೆ ದ್ವಿಚಕ್ರ ವಾಹನ ಹಾಗೂ 4 ಚಕ್ರದ ವಾಹನಗಳ ಸವಾರರು ಪರದಾಟ ನಡೆಸಿದ್ದಾರೆ.ಅಂಡರ್ ಪಾಸ್ ಗಳಲ್ಲಿ ಭಯದಿಂದ ಪ್ರಯಾಣಿಸುವಾತ್ತಾಗಿದೆ

.ಆದ್ರೆ ಇಲ್ಲಿ ಸರಿಯಾದ ನಿರ್ವಹಣೆ ಸಹ ಇಲ್ಲ.ಕರೆಂಟ್ ಆಗ್ಲಿ ಸಿಸಿ ಕ್ಯಾಮೆರ ಆಗ್ಲಿ ಯಾವುದು ಇಲ್ಲಿ ವರ್ಕ್ ಆಗಲ್ಲ.ಇದು ಸಿಎಂ ನಿವಾಸದ ಹಿಂದೆ ಇರುವ ಅಂಡರ್ ಪಾಸ್ ವ್ಯವಸ್ಥೆಯಾಗಿದೆ.ಇಲ್ಲೇ ಹೀಗೆ ಆದ್ರೆ ನಗರದಲ್ಲಿ ಇರುವ ಉಳಿದ ಅಂಡರ್ ಪಾಸ್ ಗತಿ ಏನು?ಎಂದು ಜನರು ಪ್ರಶ್ನೆ ಮಾಡ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ