ಮುಂಬೈನಿಂದ ಬಂದು ಕ್ವಾರಂಟೈನ್ ನಲ್ಲಿದ್ದ ಬಾಲಕ ಸಾವು

ಗುರುವಾರ, 4 ಜೂನ್ 2020 (17:47 IST)
ಮುಂಬೈನಿಂದ ಬಂದು ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದ ಬಾಲಕನೊಬ್ಬ ಹೊಟ್ಟೆನೋವಿನಿಂದ ಆಸ್ಪತ್ರೆಗೆ ದಾಖಲಾಗಿ ಸಾವನ್ನಪ್ಪಿದ್ದಾನೆ.

ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದ ಪದವಿ ಪೂರ್ವ ಕಾಲೇಜು ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದ ಬಾಲಕನೊಬ್ಬ ಹೊಟ್ಟೆನೋವಿನಿಂದ ರಾಯಚೂರಿನ ಓಪೆಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ದೇವದುರ್ಗ ತಾಲ್ಲೂಕು ಮದರಕಲ್ ಗ್ರಾಮದ ಮಲ್ಲೇಶ (14) ಮೃತ ಬಾಲಕ. ಪಾಲಕರೊಂದಿಗೆ ಮುಂಬೈನಿಂದ ಮೇ 16 ರಂದು ಬಂದಿದ್ದ ಬಾಲಕನಿಗೆ ಹೊಟ್ಟೆನೋವು ಶುರುವಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಾಲಕನ ಗಂಟಲು ದ್ರವ‌ ಮಾದರಿ ಸಂಗ್ರಹಿಸಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ