ಸರಕಾರದಲ್ಲಿ ಇರೋರು ದಪ್ಪ ಚರ್ಮದವರು…

ಶನಿವಾರ, 15 ಜೂನ್ 2019 (20:15 IST)
ಸರ್ಕಾರದಲ್ಲಿ ಇರೋರು ದಪ್ಪ ಚರ್ಮದವ್ರು. ಹೀಗಂತ ಬಿಜೆಪಿ ಶಾಸಕರು ಆರೋಪ ಮಾಡಿದ್ದಾರೆ.

ಜಿಂದಾಲ್ ನಿಂದ ಭೂಮಿ‌ ವಾಪಸ್ ಪಡೆಯಲಿ. ಮಾರುಕಟ್ಟೆ ದರದಂತೆ ಭೂಮಿ ಲೀಸ್ ಕೊಡಲಿ. ಇಲ್ಲ ರೈತರಿಗೆ ಭೂಮಿ ವಾಪಸ್ ಕೊಡಲಿ. ಇದು ಭ್ರಷ್ಟ ಸರ್ಕಾರ. ಎಷ್ಟು ದಿನ ಇರ್ತೀವೋ ಅಷ್ಟು ದಿನ ಬಾಚಿ ಹೋಗಬೇಕು ಅನ್ಕೊಂಡಿದಾರೆ. 

ಈ ಸರ್ಕಾರ ತೊಲಗಬೇಕು. ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಮತ್ತೆ ಬರಬೇಕು. ಯಡಿಯೂರಪ್ಪ ಆದಷ್ಟು ಬೇಗ ಮತ್ತೆ ಸಿಎಂ ಆಗಲಿ ಅಂತ ದೇವರಲ್ಲಿ ಬೇಡ್ತೀನಿ ಹೀಗಂತ ಬಿಜೆಪಿ ಪ್ರತಿಭಟನೆಯಲ್ಲಿ ಭಾಗಿಯಾದ ಶಾಸಕಿ ಶಶಿಕಲಾ ಜೊಲ್ಲೇ, ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಹೇಳಿಕೆ ನೀಡಿದ್ದಾರೆ.

ಜಿಂದಾಲ್ ಗೆ ಸರ್ಕಾರಿ ಭೂಮಿ‌ಕೊಡೋದು ಬೇಡ. ಹೆಚ್.ಡಿ.ದೇವೇಗೌಡರು ದೊಡ್ಡ ಮನಸ್ಸು ಮಾಡಿ ಅವರ ಭೂಮಿಯನ್ನ ನೀಡಲಿ. ದೇವೇಗೌಡರಿಗೆ ಸಾವಿರಾರು ಎಕರೆ ಭೂಮಿ ಇದೆ. ಆ ಭೂಮಿಯನ್ನ ರಾಜ್ಯದ ಉದ್ಯೋಗ ಸೃಷ್ಟಿ ಗೆ ಮನಸ್ಸು ಮಾಡಿ ಭೂಮಿ‌ಕೊಡಲಿ. ಸರ್ಕಾರಿ ಭೂಮಿಯನ್ನು ಕೊಡೋದು ಬೇಡ ಎಂದು ಹೆಚ್ ಡಿಡಿಗೆ ಮನವಿ ಮಾಡುವುದಾಗಿ ಹೇಳಿದ್ರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ