ಆ ಚಟಕ್ಕೆ ಬಿದ್ದ ವ್ಯಕ್ತಿ ಮಾಡಿದ್ದು ಪಾಪದ ಕೆಲಸ

ಬುಧವಾರ, 26 ಆಗಸ್ಟ್ 2020 (18:00 IST)
ಅಂಥ ಚಟಕ್ಕೆ ದಾಸನಾಗಿದ್ದ ವ್ಯಕ್ತಿಯೊಬ್ಬ ಉಂಡ ಮನೆಗೆ ದ್ರೋಹ ಬಗೆದಿದ್ದಾನೆ.

ರಾಜಧಾನಿ ಬೆಂಗಳೂರಿನ ಮನೆಯೊಂದರಲ್ಲಿ ಆರೋಪಿ ಶಂಕರಪ್ಪ ಎಂಬಾತ ಕೆಲಸಕ್ಕೆ ಇದ್ದನು.
ಸದಾ ಜೂಜಿನ ಚಟಕ್ಕೆ ಬಿದ್ದಿದ್ದ ಶಂಕರಪ್ಪ ಉಂಡ ಮನೆಗೆ ಕನ್ನ ಹಾಕಿದ್ದಾನೆ.

ಮನೆ ಮಂದಿ ಹೊರಗೆ ಹೋಗಿದ್ದಾಗ 300 ಕ್ಕೂ ಹೆಚ್ಚು ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದನು.
ಚಿನ್ನಾಭರಣ ಅಡವಿಟ್ಟ ಬಳಿಕ ಬಂದ ಹಣದಲ್ಲಿ ಜೂಜು ಆಡಿದ್ದಾನೆ.

ಮನೆ ಕಳ್ಳತನ ಕೇಸ್ ದಾಖಲಿಸಿಕೊಂಡಿದ್ದ ಗಿರಿ ನಗರ ಪೊಲೀಸರು ಮನೆಯಲ್ಲೇ ಇದ್ದ ಕಳ್ಳನನ್ನು ಬಂಧನ ಮಾಡಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ