ಕೈ ಪಾಳೆಯದಲ್ಲಿ ಬಣಗಳು ಇಲ್ಲವೇ ಇಲ್ಲ ಎಂದ ಸಚಿವ

ಶನಿವಾರ, 29 ಡಿಸೆಂಬರ್ 2018 (21:14 IST)
ಕಾಂಗ್ರೆಸ್ ಪಕ್ಷದಲ್ಲಿ ಸಮಾಜಿಕ ನ್ಯಾಯ ಹಾಗೂ ಸಮಾನತೆಯ ನ್ಯಾಯದ ತತ್ವ ಪಾಲಿಸಲಾಗುತ್ತಿದೆ. ಇಲ್ಲಿ ಯಾರ ಬಣವೂ ಇಲ್ಲ ಎಂದು ನೂತನ ಸಚಿವ ಹೇಳಿದ್ದಾರೆ.

 ಸಾಮಾಜಿಕ ನ್ಯಾಯದಡಿ ನನಗೆ ಸಚಿವ ಸ್ಥಾನ ನೀಡಲಾಗಿದೆ. ಎಲ್ಲಾ ಸಮಾಜದವರಿಗೂ ಸಮಾನತೆ ಕಾಪಾಡಲಾಗಿದೆ. ಕಾಂಗ್ರೆಸ್ ನಲ್ಲಿ ಯಾರ ಬಣವು ಇಲ್ಲ ಎಂದು ನೂತನ ಸಚಿವ ಪಿ.ಟಿ.ಪರಮೇಶ್ವರನಾಯಕ್ ತಿಳಿಸಿದ್ದಾರೆ.

ಹರಪನಹಳ್ಳಿಯಲ್ಲಿ ಮಾತನಾಡಿದ ಅವರು, ರಾಜ್ಯದ ಮೈತ್ರಿ ಸರ್ಕಾರ 5 ವರ್ಷ ಪೂರೈಸಲಿದೆ. ಬಿಜೆಪಿಯವರಿಂದ ನಮ್ಮ ಸರ್ಕಾರ ಉರುಳಿಸಲು ಸಾಧ್ಯವಿಲ್ಲ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ ಎಂದರು.

ಸುಳ್ವಾಡಿ ಗ್ರಾಮದ ವಿಷಪ್ರಸಾದ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ.   ಇಂತಹ ಘಟನೆಗಳ ಬಗ್ಗೆ ಎಚ್ಚರಿಕೆ ವಹಿಸಲಾಗುವುದು ಎಂದರು. 


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ