ಶನಿದೇವರ ದೇವಾಲಯಕ್ಕೆ ಭೇಟಿ ನೀಡಿದ ನೂತನ ಸಚಿವರಾರು ಗೊತ್ತಾ?

ಶುಕ್ರವಾರ, 28 ಡಿಸೆಂಬರ್ 2018 (18:36 IST)
ಸಚಿವ ಸ್ಥಾನ ದೊರೆತ ಸಂದರ್ಭದಲ್ಲಿ ನೂತನ ಸಚಿವರೊಬ್ಬರು ಶನಿದೇವರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ಶಿಡ್ಲಘಟ್ಟ ತಾಲೂಕಿನ ಹೆಚ್ ಕ್ರಾಸ್ ನಲ್ಲಿರುವ ಶನಿದೇವರ ದೇವಾಲಯಕ್ಕೆ ನೂತನ ಸಚಿವ ಭೇಟಿ ನೀಡಿದರು.

ಶಿಡ್ಲಘಟ್ಟದಲ್ಲಿ ನೂತನ ಸಚಿವ ಎಂ ಟಿ ಬಿ ನಾಗರಾಜ್ ಹೇಳಿಕೆ ನೀಡಿದ್ದು, ಡಿ‌ಸಿಎಂ ಪರಮೇಶ್ವರ್ ಸಮಾಧಾನವಾಗಿದ್ದಾರೆ.  ಯಾವುದೇ ಅಸಮಾಧಾನ ಇಲ್ಲ. ಪರಮೇಶ್ವರ್ ಸಂತೋಷದಿಂದ ಖಾತೆ ಬಿಟ್ಟುಕೊಟ್ಟಿದ್ದಾರೆ ಎಂದರು.  

 ಇಪ್ಪತ್ತಾರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ನಗರಾಭಿವೃದ್ಧಿ ಖಾತೆ ಪರಮೇಶ್ವರ್ ಬಳಿ ಇದೆ. ಖಾತೆ ಹಂಚಿಕೆ ಕಾರ್ಯ ಬಹಳ ಅಚ್ಚುಕಟ್ಟಾಗಿ ಮುಗಿದಿದೆ. ಎಲ್ಲರೂ ಬಹಳ ಶಾಂತಿಯುತವಾಗಿದ್ದಾರೆ ಎಂದರು.

ಸಚಿವ ಸ್ಥಾನ ದೊರೆತ ಸಂದರ್ಭದಲ್ಲಿ ನೂತನ ವಸತಿ ಸಚಿವ ಎಂಟಿಬಿ ನಾಗರಾಜ್ ಈ ಹೇಳಿಕೆ ನೀಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ