ಅಧಿಕಾರಿಯನ್ನು ನೇಣಿಗೆ ಹಾಕಿ ಎಂದ ಸಚಿವ

ಮಂಗಳವಾರ, 14 ಮೇ 2019 (16:00 IST)
ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಕಾರ್ಮಿಕ ಸಚಿವ ಫುಲ್ ಗರಂ ಆಗಿದ್ದಾರೆ.

ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ ಕಾರ್ಮಿಕ ಮಂತ್ರಿ ವೆಂಕಟರಮಣಪ್ಪ. ಬರದ ಕುರಿತ ಚರ್ಚೆಯಲ್ಲಿ ಅಧಿಕಾರಿಯನ್ನ ನೇಣಿಗೆ ಹಾಕಬೇಕು ಎಂದ ವೆಂಕಟರಮಣಪ್ಪ ಹೇಳಿದ್ರು.

ಸುಳ್ಳು ಹೇಳಿದರೆ ಬರೆ ಎಳೆಯುತ್ತೇನೆ ಎಂದು ಸಚಿವರು ಅವಾಜ್ ಹಾಕಿದ್ರು. ಕುಡಿಯುವ ನೀರಿನ ವಿಚಾರಕ್ಕೆ ಎಇಇ ಗೆ ಎಚ್ಚರಿಕೆ ನೀಡಿದರು ವೆಂಕಟರಮಣಪ್ಪ.

ಚಿತ್ರದುರ್ಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಈ ಘಟನೆ ನಡೆದಿದೆ. ಕುಡಿಯುವ ನೀರಿನ ವಿಚಾರಕ್ಕೆ ಸರಿಯಾದ ಮಾಹಿತಿ ನೀಡದ ಅಧಿಕಾರಿ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ರು.  ಚಳ್ಳಕೆರೆ ಎಇಇ  ಭೀಮಾನಾಯ್ಕ್ ಅವರಿಗೆ ನೇಣು ಹಾಕಬೇಕೆಂದು ಸಚಿವ ಹೇಳಿದ್ರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ