ದಾಂಪತ್ಯ‌ ಕಲಹವನ್ನು ಪರಿಹರಿಸಲು ಹೋಗಿದ್ದ ಅತ್ತೆಯ ಕೊಲೆ

geetha

ಭಾನುವಾರ, 11 ಫೆಬ್ರವರಿ 2024 (19:42 IST)
ತುಮಕೂರು :ಮಗಳ  ದಾಂಪತ್ಯ‌ ಕಲಹವನ್ನು ಪರಿಹರಿಸಲು ಹೋಗಿದ್ದ ಅತ್ತೆಯೇ ಕೊಲೆಯಾಗಿರುವ ಘಟನೆ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಶ್ವಿತ್‌ ಉನ್ನೀಸಾ (58) ಮೃತ ಮಹಿಳೆಯಾಗಿದ್ದು, ಅಳಿಯ ಸೈಯದ್‌ ಸುಹೇಲ್‌ ಪೊಲೀಸರ ಅತಿಥಿಯಾಗಿದ್ದಾನೆ.ಸೈಯದ್‌ ಸುಹೇಲ್‌ ತನ್ನ ಪತ್ನಿಯೊಂದಿಗೆ ಜಗಳವಾಡಿ ಆಕೆಯನ್ನು ಬಡಿದು ಹಿಂಸಿಸುತ್ತಿದ್ದ. ಈ ವಿಷಯವನ್ನು ತನ್ನ ತಾಯಿಗೆ ಕರೆ ಮಾಡಿ ಹೇಳಿಕೊಂಡಿದ್ದ ಮಗಳು, ತನ್ನ ಮನೆಗೆ ಬಂದು ಪತಿಗೆ ಬುದ್ದಿ ಹೇಳುವಂತೆ ಕೇಳಿಕೊಂಡಿದ್ದಳು. ಹೀಗಾಗಿ ಅಶ್ವಿತ್‌ ಉನ್ನೀಸಾ ಮಗಳ ಮನೆಗೆ ತೆರಳಿದ್ದರು.

ಅಳಿಯನಿಗೆ ಬುದ್ದಿ ಹೇಳು ಹೋದಾಗ ಆತ ದೊಣ್ಣೆಯಿಂದ ಅತ್ತೆಯ ತಲೆಗೆ ಬಲವಾಗಿ ಪ್ರಹಾರ ಮಾಡಿದ್ದ. ಕೂಡಲೇ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಅಶ್ವಿತ್‌ ಉನ್ನೀಸಾ ಮೃತಪಟ್ಟಿದ್ದಾರೆ. ಕೊಡಿಗೇನ ಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ