ಬಜೆಟ್ ಅಧಿವೇಶನಕ್ಕೆ ದೋಸ್ತಿ ಸರ್ಕಾರದ 9 ಶಾಸಕರು ಗೈರು

ಬುಧವಾರ, 6 ಫೆಬ್ರವರಿ 2019 (13:24 IST)
ಬೆಂಗಳೂರು : ವಿಧಾನಸೌಧದಲ್ಲಿ ಇಂದಿನಿಂದ ಬಜೆಟ್ ಅಧಿವೇಶನ ನಡೆಯುತ್ತಿದ್ದು, ವಿಪ್ ಜಾರಿ ಮಾಡಿದ್ದರೂ ಕೂಡ ಬಜೆಟ್ ಅಧಿವೇಶನಕ್ಕೆ ದೋಸ್ತಿ ಸರ್ಕಾರದ 9 ಶಾಸಕರು ಗೈರಾಗಿದ್ದಾರೆ.


ಬಜೆಟ್ ಅಧಿವೇಶನಕ್ಕೆ 8 ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ, ಬಿ. ನಾಗೇಂದ್ರ, ಮಹೇಶ್ ಕಮಟಳ್ಳಿ, ಎಂ.ಕೃಷ್ಣಪ್ಪ, ಡಾ.ಕೆ.ಸುಧಾಕರ್, ಬಿ.ಸಿ.ಪಾಟೀಲ್, ಹೆಚ್. ನಾಗೇಶ್, ಆರ್. ಶಂಕರ್ ಗೈರಾಗಿದ್ದಾರೆ.


ಹಾಗೇ ಜೆಡಿಎಸ್ ಪಕ್ಷದಿಂದ ಶಾಸಕ ನಾರಾಯಣಗೌಡ ಕೂಡ ಗೈರು ಹಾಜರಾಗಿದ್ದಾರೆ. ಇನ್ನು ಬಿಜೆಪಿ ಶಾಸಕರಾದ ಅಶ್ವತ್ಥ್ ನಾರಾಯಣ್ ಹಾಗೂ ಬಾಲಚಂದ್ರ ಜಾರಕಿಹೊಳಿ ಕೂಡ ಗೈರಾಗಿದ್ದಾರೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ