ಮಗನ ಐಎಎಸ್, ಐಪಿಎಸ್ ಕನಸು ಕಂಡ ಪೊಷಕರೇ ಶಾಕ್..!

geetha

ಶುಕ್ರವಾರ, 12 ಜನವರಿ 2024 (14:00 IST)
ಬೆಂಗಳೂರು-ಸ್ಪರ್ಧಾತ್ಮಕ ಪರಿಕ್ಷೆಗೆ ತಯಾರಾದವನು ಕಿಡ್ನಾಪ್ ಮಾಡಿದ್ದ.ಬಿಬಿಎ ಸೀಟ್ ಕೊಡಿಸಿದ್ದಾಗಿ ಉದ್ಯಮಿಯನ್ನೇ ಯುವಕ ಅಂಡ್ ಗ್ಯಾಂಗ್ ಕಿಡ್ನಾಪ್ ಮಾಡಿದೆ.ಇದೀಗ ಕಿಡ್ನಾಪ್ ಮಾಡಿದ ಆರೋಪಿಗಳಾದ ಸಚಿನ್, ಗೌರಿಶಂಕರ್ ಬಂಧಿತರಾಗಿದ್ದು,ರಾಜಾಜಿನಗರದಲ್ಲಿ ಇದೇ ತಿಂಗಳ ೫ರಂದು ಘಟನೆ ನಡೆದಿದೆ.ಸೆಂಟ್ ಜೋಸೆಫ್ ಕಾಲೇಜಿನ ಬಿಬಿಎ ಸೀಟ್ ಗೆ ಉದ್ಯಮಿ ಓಡಾಡುತಿದ್ದ.ಈ ವೇಳೆ ಸಚಿನ್ ನನ್ನ ಉದ್ಯಮಿ ಸಂಪರ್ಕಿಸಿದ್ದ ಆದರೆ ಕಾಲೇಜಿನ ನಿಯಮದ ಪ್ರಕಾರವೇ ಉದ್ಯಮಿ ಮಗಳಿಗೆ ಸೀಟ್ ಸಿಕ್ಕಿತ್ತು.ಆದರೇ ಆ ಸೀಟ್ ನನ್ನಿಂದಲೇ ಸಿಕ್ಕಿದೆ ಎಂದು ಹಣಕ್ಕೆ ಸಚಿನ್ ಡಿಮ್ಯಾಂಡ್ ಮಾಡಿದ್ದ .ಹಣಕೊಡಲು ಉದ್ಯಮಿ ಚೇತನ್ ಷಾ ನಿರಾಕರಣೆ ಮಾಡಿದ್ದಾರೆ.
 
ಹಣಕೊಡದಿದ್ದಕ್ಕೆ ತನ್ನ ಜಿಮ್ ಸಹಪಾಟಿಗಳ ಜೊತೆಗೂಡಿ ಕಿಡ್ನಾಪ್ ಗೆ ಸ್ಕೆಚ್ ಹಾಕಿದ್ದ.ಆಟೋದಲ್ಲಿ ಬಂದು ಉದ್ಯಮಿ ಕಾರ್ ತಡೆದು ಹಾಡಹಗಲೇ ಕಿಡ್ನಾಪ್ ಮಾಡಿದ್ದರು.ಆ ಬಳಿಕ ಉದ್ಯಮಿ ಮನೆಗೆ ಓರ್ವನ ಕಳುಹಿಸಿ ೭ ಲಕ್ಷ ಹಣ ಪಡೆದಿದ್ದರು.ಈ ವೇಳೆ ಬೆಂಗಳೂರನ್ನು ಕಾರ್ ನಲ್ಲೇ ಉದ್ಯಮಿ ಸಮೇತ ಓಡಾಡಿಕೊಂಡಿದ್ದರು.ಹಣ ಸಿಕ್ಕ ಬಳಿಕ ಉದ್ಯಮಿ ಚೇತನ್ ಬಿಟ್ಟು ಕಳುಹಿಸಿದ್ದರು.ಇದಾದ ಬಳಿಕ ಉದ್ಯಮಿಯಿಂದ ರಾಜಾಜಿನಗರ ಠಾಣೆಗೆ ದೂರು ನೀಡಲಾಗಿದೆ.ದೂರು ಹಿನ್ನಲೆ ರಾಜಾಜಿನಗರ ಪೊಲೀಸರು ಇಬ್ಬರನ್ನ ಬಂಧಿಸಿದರು.ಬಂಧಿತರಿಂದ ೭ ಲಕ್ಷ ನಗದು, ಮೊಬೈಲ್ ಫೋನ್ ಗಳು ವಶಕ್ಕೆ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ