ಚಿಕ್ಕಬಳ್ಳಾಪುರದ ಮತಗಟ್ಟೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಸಿದ ಪೊಲೀಸ್

ಗುರುವಾರ, 5 ಡಿಸೆಂಬರ್ 2019 (11:06 IST)
ಚಿಕ್ಕಬಳ್ಳಾಪುರ : ರಾಜ್ಯದ 15 ಕ್ಷೇತ್ರಗಳಲ್ಲಿ ಉಪಚುನಾವಣೆಗೆ ನಡೆಯುತ್ತಿರುವ ಹಿನ್ನಲೆಯಲ್ಲಿ ಮತಗಟ್ಟೆಗೆ ಮತದಾನ ಮಾಡಲು ಬರುವ ಮತದಾರರ ಮನವೊಲಿಸುವ ಕಾಂಗ್ರೆಸ್  ಕಾರ್ಯಕರ್ತರೊಬ್ಬರನ್ನು ಪೊಲೀಸರು ಹೊರಗಟ್ಟಿದ್ದಾರೆ.


ಚಿಕ್ಕಬಳ್ಳಾಪುರ ಕ್ಷೇತ್ರದ ಮತಗಟ್ಟೆಯಲ್ಲಿ ಕಾಂಗ್ರೆಸ್ ಏಜೆಂಟ್ ಚೇತನ್ ಕುಮಾರ್ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು ಎಂಬ ಕಾರಣಕ್ಕೆ ಗ್ರಾಮಾಂತರ ಠಾಣಾ  ಎಸ್ ಐ ಚೇತನ್ ಗೌಡ ಮತಗಟ್ಟೆಯಿಂದ ಹೊರದಬ್ಬಿದ್ದಾರೆ.

 

ಇದರಿಂದ ಮತಗಟ್ಟೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿದ್ದು, ಬಳಿಕ ಸ್ಥಳಕ್ಕೆ ಬಂದ ಎಸ್ ಪಿ, ಎಸ್ ಐ ಚೇತನ್ ಗೌಡಗೆ ಎಚ್ಚರಿಕೆ ನೀಡಿ  ಕಾಂಗ್ರೆಸ್ ಏಜೆಂಟ್ ಚೇತನ್ ಕುಮಾರ್ ಗೆ ಮತಗಟ್ಟೆಯಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ