ಸ್ಪೀಕರ್ ಸ್ಥಾನ ಪವಿತ್ರವಾದುದ್ದು, ಆರೋಪಗಳು ಬರಬಾರದು: ಸಚಿವ ರಮೇಶ್ ಕುಮಾರ್

ಸೋಮವಾರ, 20 ಮಾರ್ಚ್ 2017 (15:27 IST)
ಸ್ಪೀಕರ್ ಸ್ಥಾನ ಪವಿತ್ರವಾಗಿರುವುದರಿಂದ ಅವರ ವಿರುದ್ಧ ಯಾವುದೇ ಆರೋಪಗಳು ಬರಬಾರದು ಎಂದು ಆರೋಗ್ಯ ಖಾತೆ ಸಚಿವ ರಮೇಶ್ ಕುಮಾರ್ ಹೇಳಿದ್ದಾರೆ. 
 
ಸ್ಪೀಕರ್ ಕೆ.ಬಿ. ಕೋಳಿವಾಡ ಪುತ್ರಿಯರಿಗೆ ನಿವೇಶನ ಹಂಚಿಕೆ ವಿಚಾರ ಸಂಬಂಧ ಏನು ದೂರು ಬಂದಿದೆ ಎಂಬುದು ನನಗೆ ಗೊತ್ತಿಲ್ಲ. ಅವರ ಮೇಲೆ ಯಾವ ಆರೋಪಗಳು ಬಂದಿವೆ ಎನ್ನುವುದು ಗೊತ್ತಿಲ್ಲ. ಆರೋಪಗಳು ಬಂದ ಕೂಡಲೇ ಸ್ಪೀಕರ್ ರಾಜೀನಾಮೆ ನೀಡಬೇಕು ಎಂದಿಲ್ಲ ಎಂದಿದ್ದಾರೆ.
 
ಸ್ಪೀಕರ್ ವಿರುದ್ಧ ಆರೋಪ ಕೇಳಿ ಬರಬಾರದು. ಒಂದು ವೇಳೆ ಆರೋಪಗಳು ಬಂದಲ್ಲಿ ಆರೋಪಗಳ ಬಗ್ಗೆ ಸಂಪೂರ್ಣ ತನಿಖೆಯಾಗುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ. 
 
ಆದರೆ, ಆರೋಪ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡಲು ಸ್ಪೀಕರ್ ಕೆ.ಬಿ. ಕೋಳಿವಾಡ ನಿರಾಕರಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ