ಹೆಚ್.ಡಿ.ಕುಮಾರಸ್ವಾಮಿಗೆ ಆ ಪವರ್ ಇಲ್ಲ ಎಂದ ಸೈನಿಕ

ಶನಿವಾರ, 19 ಸೆಪ್ಟಂಬರ್ 2020 (21:46 IST)
ತಮ್ಮ ರಾಜಕೀಯ ಕಡು ವೈರಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಸೈನಿಕ ಮತ್ತೆ ಸಮರ ಸಾರಿದ್ದಾರೆ.

ಕುಮಾರಸ್ವಾಮಿ ಹಾಗೂ ಸಿಎಂ ಬಿ.ಎಸ್.ಯಡಿಯೂರಪ್ಪನವರು ಈಚೆಗೆ ಭೇಟಿ ಆಗಿದ್ದರು. ಆದರೆ ನನಗೆ ಸಚಿವ ಸ್ಥಾನ ಕೈತಪ್ಪುವಂತೆ ಮಾಡುವಷ್ಟು ಪವರ್ ಕುಮಾರಸ್ವಾಮಿಗೆ ಇಲ್ಲ ಎಂದು ಎಂ ಎಲ್ ಸಿ  ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.  

ಪಕ್ಷದ ವರಿಷ್ಠರ ಮೇಲೆ ತಮಗೆ ನಂಬಿಕೆ ಹೆಚ್ಚಿದ್ದು, ಈ ಬಾರಿ ತಾವು ಸಚಿವನಾಗೇ ಆಗ್ತೇನಿ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಆಗೋದು ಪಕ್ಕಾ ಆಗಿದೆ ಎಂದ ಅವರು, ಪಕ್ಷದ ನಿರ್ಧಾರಕ್ಕೆ ತಾವು ಬದ್ಧವಾಗಿರೋದಾಗಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ